Advertisement
ಹಿರಿಯ ಹೃದ್ರೋಗ ಚಿಕಿತ್ಸಾ ತಜ್ಞ ಡಾ| ಶಿವಪ್ರಸಾದ ಮುಕ್ಕಣ್ಣವರ ನೇತೃತ್ವದ ವೈದ್ಯರ ತಂಡವು ಅ.25ರಂದು ಸತತ ಐದು ತಾಸುಗಳ ನಿರಂತರ ಶ್ರಮದಿಂದ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ್ದು, ಧಾರವಾಡ ತಾಲೂಕಿನ ಅಂಬ್ಲಿಕೊಪ್ಪದ ನಾಲ್ಕು ವರ್ಷದ ಬಾಲಕ ವಿನಾಯಕ ಮಾನೆ ಸಂಪೂರ್ಣವಾಗಿ ಚೇತರಿಕೆ ಕಂಡಿದ್ದಾನೆ.
Related Articles
Advertisement
ತೆರೆದ ಹೃದಯ ಶಸ್ತ್ರಚಿಕಿತ್ಸೆಯೇ ನಮಗಿದ್ದ ಆಯ್ಕೆ ಆಗಿತ್ತು ಎಂದರು. ಸಾಮಾನ್ಯವಾಗಿ ಹೃದಯದ ಕವಾಟ ಕೆಟ್ಟಾಗ ವಾಲ್ವ್ ಸರಿಪಡಿಸಲಾಗುತ್ತದೆ. ಅಥವಾ ಯಾಂತ್ರಿಕವಾದ ಕೃತಕ ಕವಾಟವನ್ನು ಅಳವಡಿಸಲಾಗುತ್ತದೆ. ಈ ಮಗುವಿನ ಸ್ಥಿತಿಯಲ್ಲಿ ಕೃತಕ ಕವಾಟ ಅಳವಡಿಸುವ ಪ್ರಶ್ನೆಯೇ ಇರಲಿಲ್ಲ. ಕಾರಣ ಇದು ಸಣ್ಣ ಗಾತ್ರದ್ದಾಗಿದ್ದು, ಲಭ್ಯತೆಯೂ ಇರಲಿಲ್ಲ.
ಲಭ್ಯವಿರುವ ಅತಿ ಸಣ್ಣದಾದ ಮೆಕಾನಿಕಲ್ ವಾಲ್ವ್ 17 ಎಂಎಂ ಅಳತೆಯದ್ದಾಗಿದ್ದು, ಇದು ವಯಸ್ಕರಲ್ಲಿನ ದೊಡ್ಡದಾದ ಹೃದಯಕ್ಕೆ ಬಳಕೆ ಮಾಡಲಾಗುತ್ತದೆ. ಹೀಗಾಗಿ ಅಪರೂಪದ Ross-konno ಪ್ರಕ್ರಿಯೆಯನ್ನೇ ಆಯ್ಕೆ ಮಾಡಿಕೊಳ್ಳಬೇಕಾಯಿತು ಎಂದರು.
ಬಾಲಕನ ಬಲಭಾಗದಲ್ಲಿ ಪಲ್ಮನರಿ ವಾಲ್ವ್ ಇದ್ದು, ಇದನ್ನು ಎಡ ಭಾಗದ ಅಯೊರ್ಟಿಕ್ ಸ್ಥಾನಕ್ಕೆ ಬದಲಾಯಿಸಲಾಯಿತು. ಬಲಭಾಗದ ಕವಾಟವನ್ನು ರೋಗಿಯ ಬಯೋಲಾಜಿಕಲ್ ಟಿಷೂ ಬಳಕೆ ಮಾಡಿ ಮರುರೂಪಿಸಿ ಅಳವಡಿಸಲಾಯಿತು. Ross-konno ಚಿಕಿತ್ಸೆಯ ಅನುಕೂಲ ಏನೆಂದರೆ ಪಲ್ಮನರಿ ವಾಲ್ವ್ ಸಾಮಾನ್ಯವಾಗಿ ಕೆಲಸ ಮಾಡಲಿದ್ದು, ವಯಸ್ಸಿಗೆ ಅನುಗುಣವಾಗಿ ಬೆಳೆಯಲಿದೆ.
ಹೀಗಾಗಿ ಪುನರಾವರ್ತಿತ ಪ್ರಕ್ರಿಯೆ ಸಾಧ್ಯತೆಗಳು ಕಡಿಮೆ. ಮಕ್ಕಳು ಬೆಳೆದಂತೆ ಅದು ಬೆಳೆಯಲಿದ್ದು, ಮಗುವಿಗೆ ಯಾವುದೇ ತೊಂದರೆ ಆಗದು ಎಂದರು. ಅರವಳಿಕೆ ತಜ್ಞ ಡಾ|ಗಣೇಶ ನಾಯಕ್, ಅಜಯ ಹುನಮನಿ, ಮಂಜುನಾಥ ಮಾನೆ, ರೇಣುಕಾ ಮಾನೆ ಪತ್ರಿಕಾಗೋಷ್ಠಿಯಲ್ಲಿ ಇದ್ದರು.