Advertisement

ಪಣಜಿ: ಸ್ಕೂಬಾ ಡೈವಿಂಗ್‌ ಮಾಡುವಾಗ ಹೃದಯಾಘಾತ, ಮೃತ್ಯು

12:07 PM Jan 01, 2023 | Team Udayavani |

ಪಣಜಿ: ದ್ವೀಪವೊಂದರ ಸಮುದ್ರದಲ್ಲಿ ಸ್ಕೂಬಾ ಡೈವಿಂಗ್ ಮಾಡುವಾಗ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ನಡೆದಿದೆ.

Advertisement

ಮುಂಬೈ ಪ್ರವಾಸಿ ಪ್ರಕಾಶ್ ಮಧುಸೂದನ್ ಖೇರ್ ಮೃತಪಟ್ಟ ವ್ಯಕ್ತಿ.

ಗೋವಾದ ವಾಸ್ಕೊಗೆ ಆಗಮಿಸಿದ್ದ ಪ್ರಕಾಶ್, ದ್ವೀಪವೊಂದರ ಸಮುದ್ರದಲ್ಲಿ ಸ್ಕೂಬಾ ಡೈವಿಂಗ್ ಮಾಡುವಾಗ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಮುಂಬೈನ ಖೇರ್ ಕುಟುಂಬ ಶನಿವಾರ (ಡಿ.31) ಸಮುದ್ರದಲ್ಲಿ ಸ್ಕೂಬಾ ಡೈವಿಂಗ್ ಮಾಡಲು ಪ್ರವಾಸಿ ಬೋಟ್ ಮೂಲಕ ಕಲಂಗುಟ್‍ನಿಂದ ದ್ವೀಪಕ್ಕೆ ಬಂದಿತ್ತು. ಈ ಸಂದರ್ಭದಲ್ಲಿ ಸ್ಕೂಬಾ ಡೈವಿಂಗ್ ಮಾಡುವಾಗ ಪ್ರಕಾಶ್ ಅಸ್ವಸ್ಥಗೊಂಡಿದ್ದರಿಂದ ಬೋಟ್ ನಲ್ಲಿದ್ದ ಕಾರ್ಮಿಕರು ಕೂಡಲೇ ಅವರನ್ನು ದಡಕ್ಕೆ ಕರೆತಂದು ಪ್ರಥಮ ಚಿಕಿತ್ಸೆ ನೀಡಿದ್ದು, ಬಳಿಕ ದೃಷ್ಟಿ ಸಂಸ್ಥೆಯ ಜೀವರಕ್ಷಕರು ಅವರಿಗೆ ಪ್ರಥಮ ಚಿಕಿತ್ಸೆ ನೀಡಿದರು.

ಆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ದಾಬೋಲಿ-ಚಿಕಲಿಯ ಉಪ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಬಳಿಕ ಅಲ್ಲಿನ ವೈದ್ಯರು ಪರೀಕ್ಷಿಸಿ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.

Advertisement

ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ ಮುರಗಾಂವ್ ಪೊಲೀಸರು ಆಸ್ಪತ್ರೆಗೆ ತೆರಳಿ ಘಟನೆ ಕುರಿತು ಪರಿಶೀಲನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next