Advertisement

Kumbla ಹೃದಯಾಘಾತ: ಇಸ್ರೋ ವಿಜ್ಞಾನಿ ಸಾವು

12:24 AM Dec 18, 2023 | Team Udayavani |

ಕುಂಬಳೆ: ಬೆಂಗಳೂರು ಇಸ್ರೋ ಉದ್ಯೋಗಿ, ಕಾಸರಗೋಡಿನ ಯುವ ವಿಜ್ಞಾನಿ ಹೃದಯಾಘಾತದಿಂದ ಡಿ. 15ರಂದು ನಿಧನ ಹೊಂದಿದ್ದಾರೆ.

Advertisement

ಕಾಸರಗೋಡು ಬೆಟ್ಟಂಬಾರೆ ಸೂರ್ಲು ನಿವಾಸಿ ಅಶೋಕ್‌ (43) ಮಂಡಿ ನೋವಿಗೆ ಸರ್ಜರಿ ಚಿಕಿತ್ಸೆ ನಡೆದ ಬಳಿಕ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದರು. ಈ ಸಂದರ್ಭದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು. ಮೃತರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಕೂಡ್ಲು ಗೋಪಾಲಕೃಷ್ಣ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಪ.ಪೂ. ಶಿಕ್ಷಣ, ಪೆರಿಯ ಪಾಲಿಟೆಕ್ನಿಕಲ್‌ ವಿದ್ಯಾಲಯದಲ್ಲಿ ಡಿಪ್ಲೋಮಾ ಮಾಡಿ ಬಳಿಕ ಇಸ್ರೋದಲ್ಲಿ ಉದ್ಯೋಗಿಯಾಗಿದ್ದರು.

ಚಂದ್ರಯಾನ ಯಶಸ್ವಿ ಉಡ್ಡಯನದಲ್ಲಿ ಇವರ ಪಾತ್ರವಿದ್ದು, ಕಾಸರಗೋಡು ಗಣೇಶ ಮಂದಿರದಲ್ಲಿ ಜರಗಿದ ಸಾರ್ವಜನಿಕ ಗಣೇಶೋತ್ಸವ ಸಮಾರಂಭದಲ್ಲಿ ಇವರನ್ನು ಸಮ್ಮಾನಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next