Advertisement

ಕೋವಿಡ್-19 ಹಿನ್ನೆಲೆ ಪೌರಕಾರ್ಮಿಕರಿಗೆ ನಿತ್ಯವೂ ಆರೋಗ್ಯ ತಪಾಸಣೆ

10:33 AM Apr 01, 2020 | keerthan |

ಗಂಗಾವತಿ: ಕೋವಿಡ್-19 ವೈರಸ್ ಹರಡದಂತೆ ನಗರದಾದ್ಯಂತ ಸ್ವಚ್ಛತೆ ಕಾರ್ಯ ಮಾಡುತ್ತಿರುವ ಪೌರಕಾರ್ಮಿಕರಿಗೆ ನಗರಸಭೆಯಲ್ಲಿ ಇಂದಿನಿಂದ ಪ್ರತಿನಿತ್ಯ ಆರೋಗ್ಯ ತಪಾಸಣೆ ನಡಸಿ ಕರ್ತವ್ಯಕ್ಕೆ ಕಳುಹಿಸಲಾಗುತ್ತಿದೆ.

Advertisement

ನಗರಸಭೆ ವ್ಯಾಪ್ತಿಯಲ್ಲಿ 200ಕ್ಕೂ ಅಧಿಕ ಸಿಬ್ಬಂದಿ ಹಾಗೂ ಪೌರ ಕಾರ್ಮಿಕರಿದ್ದು ನಗರದಲ್ಲಿ ಕಳೆದ ಒಂದು ವಾರದಿಂದ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡುವ ಜತೆಗೆ ಅಂಗಡಿ‌ ಮುಂಗಟ್ಟುಗಳು ತೆರೆದಂತೆ ಪೊಲೀಸರ ಜತೆ ಸೇರಿ ಕಾವಲು ಕಾಯುವುದು ಜನರಿಗೆ ತೊಂದರೆ ಆಗದಂತೆ ದಿನಸಿ ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಸಾಮಾನು ವಿತರಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

10ಗಂಟೆ ವರೆಗೆ ಕೆಲಸ: ಕಾರ್ಮಿಕರ ಸಂಘಟನೆಗಳ ಕ್ರಿಯಾ ಸಮಿತಿ ಪರವಾಗಿ ನ್ಯಾಯವಾದಿ ಮೈತ್ರಿ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸ್ಪಂದಿಸಿದ ಹೈಕೋರ್ಟ್ ಪೌರಕಾರ್ಮಿಕರು ಪ್ರತಿದಿನ ಬೆಳ್ಳಿಗ್ಗೆ10ಗಂಟೆಯ ವರೆಗೆ ಅಗತ್ಯ ಸುರಕ್ಷತೆಯೊಂದಿಗೆ ಕೆಲಸ ಮಾಡಿ ನಂತರ ಮನೆಗೆ ತೆರಳುವಂತೆ ಆದೇಶಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next