Advertisement

ಅವನು ನನ್ನ ಮಗನಲ್ಲ, ಮೋದಿ ಪುತ್ರ : ವಿದ್ಯಾರ್ಥಿ ಪೋಷಕರ ಭಾವನಾತ್ಮಕ ನುಡಿ

08:49 PM Mar 12, 2022 | Team Udayavani |

ಯುದ್ಧಪೀಡಿತ ಉಕ್ರೇನ್‌ನಿಂದ ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲಾಗಿದೆ. ರಷ್ಯಾ ದಾಳಿಗೆ ತೀವ್ರವಾಗಿ ತುತ್ತಾಗಿರುವ ಸುಮಿ ನಗರದಲ್ಲಿ ವಾಸವಿದ್ದ ಮಗ ಭಾರತಕ್ಕೆ ವಾಪಸಾಗುವುದಕ್ಕೆ ಸಾಧ್ಯವೇ ಇಲ್ಲ ಎಂದುಕೊಂಡಿದ್ದ ಕಾಶ್ಮೀರದ ಸಂಜಯ್‌ ಪಂಡಿತ್‌, ಶುಕ್ರವಾರ ತಮ್ಮ ಮಗ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆಯೇ ಆನಂದಭಾಷ್ಪ ಸುರಿಸಿದ್ದಾರೆ.

Advertisement

“ಈಗ ಬಂದಿರುವುದು ನನ್ನ ಮಗನಲ್ಲ, ಪ್ರಧಾನಿ ಮೋದಿ ಜೀ ಅವರ ಪುತ್ರ’ ಎಂದು ಕಣ್ಣೀರು ಒರೆಸಿಕೊಳ್ಳುತ್ತಾ ಹೇಳಿದ್ದಾರೆ.

ಕೇವಲ ಸಂಜಯ್‌ ಪಂಡಿತ್‌ ಮಾತ್ರವಲ್ಲ, ವಿಮಾನ ನಿಲ್ದಾಣದಲ್ಲಿ ಮಕ್ಕಳಿಗಾಗಿ ಕಾಯುತ್ತಾ ನಿಂತಿದ್ದ ಪೋಷಕರೆಲ್ಲರೂ ಮಕ್ಕಳನ್ನು ಕಂಡೊಡನೆ, “ಭಾರತ್‌ ಮಾತಾ ಕೀ ಜೈ’ ಎಂದು ಘೋಷಣೆ ಕೂಗಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next