Advertisement

ಇನ್ನೂ ಮೂರು ವರ್ಷ ಜೆಡಿಎಸ್‌ನಲ್ಲೇ ಇರುವೆ

10:57 PM Mar 08, 2020 | Team Udayavani |

ಮೈಸೂರು: ನಾನು ಜೆಡಿಎಸ್‌ನಿಂದ ಗೆದ್ದಿದ್ದು, ಇನ್ನೂ ಮೂರು ವರ್ಷ ಎಲ್ಲಿಗೂ ಹೋಗಲು ಆಗುವುದಿಲ್ಲ. ಜೆಡಿಎಸ್‌ನಲ್ಲೇ ಇರುತ್ತೇನೆ ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ಸ್ಪಷ್ಟಪಡಿಸಿದರು. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್‌ ಕಾರ್ಯಕರ್ತರು ಗಟ್ಟಿಯಾಗಿದ್ದು, ಪಕ್ಷ ಗಟ್ಟಿಯಾಗಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

Advertisement

ಕುಮಾರಸ್ವಾಮಿ ಅವರಿಗೆ ದೈವ ಬಲವಿತ್ತು. ಹಾಗಾಗಿ ಅವರು ಸಿಎಂ ಆದರು. ಯಡಿಯೂರಪ್ಪ ನಾಲ್ಕು ಬಾರಿ ಮುಖ್ಯಮಂತ್ರಿ ಆದರು. ಕುಮಾರಸ್ವಾಮಿ ಅವರಿಗೆ ಇನ್ನೂ ವಯಸ್ಸಿದೆ, ದೈವ ಬಲವಿದ್ದರೆ ಅವರೂ ಸಹ ಮತ್ತೆರಡು ಬಾರಿ ಮುಖ್ಯಮಂತ್ರಿ ಆಗಬಹುದು. ಕುಮಾರಸ್ವಾಮಿ ಮತ್ತು ನಾನು ಈ ಮೊದಲು ಹೇಗಿದ್ದೇವೋ ಈಗಲೂ ಹಾಗೆಯೇ ಇದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next