Advertisement

State Government ಕೆಡವಲು ಎಚ್‌ಡಿಕೆ ಯತ್ನ: ಸಚಿವ ಕೃಷ್ಣಬೈರೇಗೌಡ

09:21 PM Jul 31, 2024 | Team Udayavani |

ಸಕಲೇಶಪುರ(ಹಾಸನ): ಕೇಂದ್ರ ಸರಕಾರದ ಬೃಹತ್‌ ಕೈಗಾರಿಕಾ ಇಲಾಖೆ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರಕಾರವನ್ನು ಬುಡಮೇಲು ಮಾಡಲು ಯತ್ನಿಸುತ್ತಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಗಂಭೀರ ಆರೋಪ ಮಾಡಿದರು.

Advertisement

ತಾಲೂಕಿನ ದೊಡ್ಡತಪ್ಪಲು ಬಳಿ ಭೂ ಕುಸಿತ ಪ್ರದೇಶಕ್ಕೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿ, ಏನಾದರೂ ಮಾಡಿ ಸರಕಾರ ಕೆಡವಲು ಬಿಜೆಪಿ-ಜೆಡಿಎಸ್‌ನವರು ಯೋಚಿಸುತ್ತಿದ್ದಾರೆ. ಇ.ಡಿ. (ಜಾರಿ ನಿರ್ದೇಶನಾಲಯ) ಬಿಜೆಪಿಯ ಪೊಲಿಟಿಕಲ್‌ ವಿಂಗ್‌ ಹಾಗೂ ಪೊಲಿಟಿಕಲ್‌ ಟೂಲ್‌ಕಿಟ್‌ ಸಹ ಆಗಿದೆ ಎಂದು ವಾಗ್ಧಾಳಿ ನಡೆಸಿದರು.

ಮುಡಾದಲ್ಲಿ ಹೆಚ್ಚು ಸೈಟ್‌ ತೆಗೆದುಕೊಂಡಿರುವುದು ಬಿಜೆಪಿ, ಜೆಡಿಎಸ್‌ನವರು. ಸಾವಿರಾರು ನಿವೇಶನ ಹಾಗೂ ಸಾವಿರಾರು ಬದಲಿ ನಿವೇಶನ ಪಡೆದಿದ್ದಾರೆ. ವಾಲ್ಮೀಕಿ ಹಗರಣ ಮುಚ್ಚಿ ಹಾಕಿದರು ಎಂದು ಯತ್ನಾಳ್‌ ಅವರು ಹೇಳಿದ್ದಾರೆ. ಇನ್ನೊಂದು ಕಡೆ ಪಾದಯಾತ್ರೆ ಬೇಕಾಗಿಲ್ಲ ಎಂದು ಜೆಡಿಎಸ್‌ನವರು ಹೇಳುತ್ತಿದ್ದಾರೆ. ಏಕೆಂದರೆ ಅವರೇ ಹೆಚ್ಚು ಫ‌ಲಾನುಭವಿಗಳು ಎಂದು ಅವರು ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next