Advertisement

Politics: ಎಚ್ಡಿಕೆಯನ್ನು ವಿದ್ಯುತ್‌ ಕಳ್ಳ ಎಂದಿಲ್ಲ- ಡಿಕೆಶಿ

12:38 AM Nov 17, 2023 | Team Udayavani |

ಬೆಂಗಳೂರು: ಎಚ್‌.ಡಿ. ಕುಮಾರಸ್ವಾಮಿ ಅವರನ್ನು ವಿದ್ಯುತ್‌ ಕಳ್ಳ ಎಂದು ನಾನಂತೂ ಹೇಳಿಲ್ಲ. ಅಂತಹ ಕೀಳು ಮಟ್ಟದ ರಾಜಕಾರಣ ಮಾಡುವ ಆವಶ್ಯಕತೆ ನನಗಿಲ್ಲ. ಈ ಬಗ್ಗೆ ತಲೆ ಹಾಕದಂತೆ ನಮ್ಮ ಕಾರ್ಯಕರ್ತರಿಗೂ ಹೇಳಿದ್ದೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದರು.

Advertisement

ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಕಾರನ್ನು ಚಾಲಕ ಅಪಘಾತ ಮಾಡಿದರೂ ಜನ ಮಾತ್ರ, ಡಿ.ಕೆ.ಶಿವಕುಮಾರ್‌ ಕಾರು ಅಪಘಾತವಾಯಿತು ಎನ್ನುತ್ತಾರೆಯೇ ಹೊರತು, ಚಾಲಕನ ತಪ್ಪು ಎನ್ನುವುದಿಲ್ಲ. ಇದೂ ಹಾಗೆಯೇ. ಯಾರೋ ಗುತ್ತಿಗೆದಾರನಿಗೆ ಅಲಂಕಾರ ಮಾಡು ಎಂದಿರುತ್ತಾರೆ. ಅವರು ಈ ಕೆಲಸ ಮಾಡಿರುತ್ತಾರೆ. ಕುಮಾರಸ್ವಾಮಿ ಬಹಳ ದೊಡ್ಡತನದಲ್ಲಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಶ್ಲಾ ಸಿದರು.

ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಮನೆಗೆ ಅಕ್ರಮ ಕರೆಂಟ್‌ ಪೂರೈಕೆ ವಿಚಾರವನ್ನು ನಾವು ಅವರಂತೆ ವಿಚಾರ ಸಿಕ್ಕಿದೆ ಎಂದು ಎಳೆಯುವುದಿಲ್ಲ. –ಚಲುವರಾಯಸ್ವಾಮಿ, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next