Advertisement

ಸಿಎಂಗೆ ತರಾಟೆ; ಮರಿಸ್ವಾಮಿಗೆ ಭರ್ಜರಿ ಸನ್ಮಾನ ಮಾಡಿದ ಎಚ್‌ಡಿಕೆ 

11:24 AM Apr 26, 2018 | |

ಮೈಸೂರು: ನಿಮಗೆ ಓಟ್‌ ಹಾಕಲ್ಲ ಎಂದು ಸಿದ್ದರಾಮಯ್ಯ ಅವರಿಗೆ ಬಹಿರಂಗವಾಗಿ ತಿರುಗೇಟು ನೀಡಿ ಸುದ್ದಿಯಾಗಿರುವ ಜೆಡಿಎಸ್‌ ಕಾರ್ಯಕರ್ತ ಮರಿಸ್ವಾಮಿಗೆ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರು ಗುರುವಾರ ಸನ್ಮಾನ ಮಾಡಿ ಅಭಿನಂದಿಸಿದ್ದಾರೆ. 

Advertisement

ಮರಿಸ್ವಾಮಿ ಅವರಿಗೆ ಹಾರ, ಶಾಲು, ಮೈಸೂರು  ಪೇಟ ತೊಡಿಸಿ ಅಭಿನಂದಿಸಿದ ಕುಮಾರಸ್ವಾಮಿ ಅವರು ಇಂತಹ ನಿಷ್ಟಾವಂತ ಜೆಡಿಎಸ್‌ ಕಾರ್ಯಕರ್ತರಿಂದ ನನ್ನ ಆತ್ಮಸ್ಥೈರ್ಯ ಹೆಚ್ಚಿದೆ ಎಂದರು. 

ಸನ್ಮಾದ ವೇಳೆ ಚಾಮುಂಡೇಶ್ವರಿ ಶಾಸಕ ಜಿ.ಟಿ.ದೇವೇಗೌಡ ಮತ್ತು ನೂರಾರು ಜೆಡಿಎಸ್‌ ಕಾರ್ಯಕರ್ತರು ಉಪಸ್ಥಿತರಿದ್ದರು. 

ಕೋಲು ಕೊಟ್ಟು ಪೆಟ್ಟು ತಿಂದಿದ್ದ ಸಿಎಂ !

ಏ ಮರಿಸ್ವಾಮಿ, ಬಾರಯ್ಯ ಇಲ್ಲಿ,ನೀನೇ ಇಲ್ಲೆಲ್ಲಾ ಓಡಾಡಿಕೊಂಡು ನನಗೆ ಓಟು ಹಾಕಿಸಬೇಕು’ ಎಂದು ಸಿಎಂ ಸಿದ್ದರಾಮಯ್ಯ ಕರೆದಿದ್ದರು. ಇದಕ್ಕೆಪಂಚಾಯತ್‌ ಸದಸ್ಯ ಮರಿಸ್ವಾಮಿ   “ನಾನು ಈಗ ಜೆಡಿಎಸ್‌ನಲ್ಲಿದ್ದೀನಿ, ನಿಮಗೆ ಓಟ್‌ ಹಾಕಲ್ಲ’ ಎಂದು ಮುಖಕ್ಕೆ ಹೊಡೆದ ರೀತಿಯಲ್ಲಿ ಹೇಳಿದ್ದರು.

Advertisement

ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಬುಧವಾರ ರೋಡ್‌ ಶೋ ನಡೆಸಿ ಮತಯಾಚಿಸಲು ಬಂದಿದ್ದ ಸಂದರ್ಭದಲ್ಲಿ ಹಳೇ ಕೆಸರೆಯಲ್ಲಿ ನಡೆದ ಈ ಘಟನೆಯಿಂದ ಸಿಎಂ ಸಿದ್ದರಾಮಯ್ಯ ಸಾರ್ವಜನಿಕವಾಗಿ ಮುಜುಗರಕ್ಕೀಡಾಗುವಂತಾಗಿತ್ತು. 

ಬೆದರಿಕೆ 

ನನ ಗೆ ಸಿಎಂ ಬೆಂಬಲಿಗರು ಮತ್ತು ಕಾಂಗ್ರೆಸ್‌ ಕಾರ್ಯಕರ್ತರು ಬೆದರಿಕೆ ಹಾಕಿದ್ದಾರೆ ಎಂದು ಮರಿಸ್ವಾಮಿ ಹೇಳಿದ್ದಾರೆ. 

 

Advertisement

Udayavani is now on Telegram. Click here to join our channel and stay updated with the latest news.

Next