Advertisement

“ಎಚ್ಡಿಕೆ ಡ್ರೈವರ್‌, ಸಿದ್ದು ಕಂಡಕ್ಟರ್‌’

06:00 AM Jul 04, 2018 | Team Udayavani |

ವಿಧಾನಪರಿಷತ್ತು: ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ ಡ್ರೈವರ್‌ ಆಗಿದ್ದರೆ, ಸಿದ್ದರಾಮಯ್ಯ ಕಂಡಕ್ಟರ್‌ ಆಗಿದ್ದಾರೆ. ಕಂಡಕ್ಟರ್‌
“ರೈಟ್‌’ ಎಂದು ಹೇಳುವವರೆಗೆ ಸಮ್ಮಿಶ್ರ ಸರ್ಕಾರದ ಈ ಬಸ್‌ ಮುಂದೆ ಚಲಿಸುವುದಿಲ್ಲ ಎಂದು ಬಿಜೆಪಿ ಸದಸ್ಯ ಆಯನೂರು ಮಂಜುನಾಥ್‌ ವ್ಯಂಗ್ಯದ
ಧಾಟಿಯಲ್ಲಿ ಹೇಳಿದರು. ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ವಿಧಾನಸಭೆಯಲ್ಲಿ ಕುಮಾರಸ್ವಾಮಿ ಮುಂದಿನ
ಸೀಟಿನಲ್ಲಿ ಕೂತಿದ್ದರೆ, ಸಿದ್ದರಾಮಯ್ಯನವರು ಅವರ ಹಿಂದಿನ ಸೀಟಿನಲ್ಲಿ ಕೂತಿರುವುದನ್ನು ಪ್ರಸ್ತಾಪಿಸುತ್ತ, ಈ ಸಮ್ಮಿಶ್ರ ಸರ್ಕಾರಕ್ಕೆ ಮುಂದೆ ಕೂತಿರುವ ಕುಮಾರಸ್ವಾಮಿ ಡ್ರೈವರ್‌, ಹಿಂದೆ ಕೂತಿರುವ ಸಿದ್ದರಾಮಯ್ಯ ಕಂಡಕ್ಟರ್‌ ಆಗಿದ್ದಾರೆ ಎಂದು ಕಾಲೆಳೆದರು. ಇದು ಟ್ರೇಲರ್‌ ಅಷ್ಟೇ: ರಾಜ್ಯಪಾಲರ ಭಾಷಣದ ಮೂಲಕ ಸರ್ಕಾರದ ಮುಂದಿನ ಯೋಜನೆಗಳ ಬಗ್ಗೆ ಟ್ರೇಲರ್‌ ಅಷ್ಟೇ ಬಿಟ್ಟಿದ್ದೀವಿ. 5ನೇ ತಾರೀಕಿಗೆ ಪಿಕ್ಷರ್‌ ರಿಲೀಸ್‌ ಆಗಲಿದೆ ನೋಡುತ್ತಾ ಇರಿ ಎಂದು ಜೆಡಿಎಸ್‌ನ ಟಿ.ಎ ಶರವಣ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಮಾತನಾಡಿ ಹೇಳಿದರು.

Advertisement

ಬಿಜೆಪಿ ಧರಣಿ
ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಮಾತನಾಡುವಾಗ ಜೆಡಿಎಸ್‌ನ ಭೋಜೇಗೌಡ ಕೇಂದ್ರ ಸರ್ಕಾರದ “ಪ್ರಧಾನಮಂತ್ರಿ ಫ‌ಸಲ್‌ ವಿಮಾ ಯೋಜನೆ’ ಉಲ್ಲೇಖೀಸಿ ಇದೊಂದು ರೈತರ ಪಾಲಿನ ಮಾರಕ ಹಾಗೂ ಮಹಾ ಮೋಸದ ಯೋಜನೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಟು ಧಾಟಿಯಲ್ಲಿ ಮಾತನಾಡಿದರು. ಇದಕ್ಕೆ ಆಕ್ಷೇಪಿಸಿ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತಿಗೆ ಮುಂದಾದರು. ಆದರೆ, ಭೋಜೇಗೌಡ ತಮ್ಮದೇ ಮಾತು ಮುಂದುವರಿಸಿದರು. ಪ್ರತಿಪಕ್ಷದ ನಾಯಕ ಎದ್ದು ನಿಂತಾಗಲೂ ಸದಸ್ಯರು ಗೌರವ ಕೊಡುವುದಿಲ್ಲ ಎಂದರೆ ಹೇಗೆ ಎಂದು ಬಿಜೆಪಿಯ
ಉಳಿದ ಸದಸ್ಯರ ಜೊತೆ ಸೇರಿ ಸದನದ ಬಾವಿಗಳಿದು ಧರಣಿ ನಡೆಸಿದರು. ಸಭಾಪತಿಯವರ ಮಧ್ಯಸ್ಥಿಕೆಯಿಂದ ಬಿಜೆಪಿ ಸದಸ್ಯರು ಧರಣಿ ವಾಪಸ್‌ ಪಡೆದರು.

ಸಮ್ಮಿಶ್ರ ಸರ್ಕಾರದಲ್ಲಿ ಹೊಂದಾಣಿಕೆ ಇಲ್ಲ ಅನ್ನುವುದು ರಾಜ್ಯಪಾಲರ ಭಾಷಣದಲ್ಲಿ ಸ್ಪಷ್ಟವಾಗಿ  ಎದ್ದು ಕಾಣುತ್ತಿದೆ. ರೈತರ ಸಾಲ ಮನ್ನಾ ವಿಚಾರದಲ್ಲಿ ಜೆಡಿಎಸ್‌ ಕಾಂಗ್ರೆಸ್‌ ಪಕ್ಷದ ಹೆಗಲ ಮೇಲೆ ಬಂದೂಕು ಇಟ್ಟಿದೆ. ಸ್ವಲ್ಪವೂ ಹೆಚ್ಚು ಕಡಿಮೆ ಆದರೆ ಕಾಂಗ್ರೆಸ್‌ಗೆ ಗುಂಡು ಬೀಳುವುದು ಗ್ಯಾರಂಟಿ.
● ಆಯನೂರು ಮಂಜುನಾಥ, ಬಿಜೆಪಿ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next