Advertisement

ವಿಶ್ರಾಂತಿಗೆ ಮೊರೆ ಹೋದ ಎಚ್‌ಡಿಡಿ-ಎಚ್‌ಡಿಕೆ

06:56 AM Apr 30, 2019 | Team Udayavani |

ಬೆಂಗಳೂರು: ಶ್ರೀಲಂಕಾದಲ್ಲಿನ ಸರಣಿ ಬಾಂಬ್‌ ಸ್ಫೋಟದಲ್ಲಿ ನೆಲಮಂಗಲ, ದಾಸರಹಳ್ಳಿ, ತುಮಕೂರಿನ ಜೆಡಿಎಸ್‌ ಮುಖಂಡರು ಮೃತಪಟ್ಟ ಹಿನ್ನೆಲೆಯಲ್ಲಿ ಪ್ರಕೃತಿ ಚಿಕಿತ್ಸೆಯಿಂದ ದಿಢೀರ್‌ ವಾಪಸ್ಸಾಗಿದ್ದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತೆ ಉಡುಪಿಯ ಕಾಪು ಬಳಿಯ ರೆಸಾರ್ಟ್‌ಗೆ ತೆರಳಿದ್ದಾರೆ.

Advertisement

ಸಾಯಿರಾಧಾ ಹೆರಿಟೇಜ್‌ ರೆಸಾರ್ಟ್‌ನಲ್ಲಿ ಐದು ದಿನಗಳ ಕಾಲ ಕುಮಾರಸ್ವಾಮಿ ತಂಗಲಿದ್ದು, ಪಂಚಕರ್ಮ ಚಿಕಿತ್ಸೆಗೆ ಒಳಗಾಗಲಿದ್ದಾರೆ. ನಂತರ ವಾಪಸ್ಸಾಗಲಿದ್ದಾರೆ. ಕುಮಾರಸ್ವಾಮಿಯವರ ಜತೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರೂ ತೆರಳಿದ್ದು, ಒಂದು ವಾರ ಕಾಲ ಪಂಚಕರ್ಮ ಚಿಕಿತ್ಸೆ ಪಡೆಯಲಿದ್ದಾರೆ.

ಮುಖ್ಯಮಂತ್ರಿಯವರ ಜತೆ ಸಚಿವರಾದ ಪುಟ್ಟರಾಜು, ವಿಧಾನಪರಿಷತ್‌ ಸದಸ್ಯ ಬೋಜೇಗೌಡ ಸೇರಿ ಹಲವು ಶಾಸಕರು ತೆರಳಿದ್ದಾರೆ. ಲೋಕಸಭೆ ಚುನಾವಣೆ ಫ‌ಲಿತಾಂಶದ ನಂತರ ಸಮ್ಮಿಶ್ರ ಸರ್ಕಾರದ ಪತನಕ್ಕೆ ಬಿಜೆಪಿ ಕಾರ್ಯತಂತ್ರ ರೂಪಿಸಿದೆ ಎಂಬ ಮಾತುಗಳ ಹಿನ್ನೆಲೆಯಲ್ಲಿ ದೇವೇಗೌಡರು ಹಾಗೂ ಕುಮಾರಸ್ವಾಮಿಯವರು ಸರ್ಕಾರ ಉಳಿಸಿಕೊಳ್ಳುವ ಬಗ್ಗೆ ರೆಸಾರ್ಟ್‌ನಲ್ಲಿಯೇ ತಂತ್ರಗಾರಿಕೆ ರೂಪಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next