Advertisement

ನನ್ನದು ಅಭಿವೃದ್ಧಿ ಸಿದ್ಧಾಂತ, ಲೂಟಿಯದಲ್ಲ: ರೇವಣ್ಣ

05:29 PM Sep 05, 2022 | Team Udayavani |

ಹಾಸನ: ನನ್ನದು ಅಭಿವೃದ್ಧಿಯ ಐಡಿಯಾಲಜಿ. ಅವರದು ಲೂಟಿ ಹೊಡೆಯುವ ಐಡಿಯಾಲಜಿ ಎಂದು ಜೆಡಿಎಸ್‌ ಮುಖಂಡ, ಮಾಜಿ ಸಚಿವ ಎಚ್‌. ಡಿ.ರೇವಣ್ಣ ಅವರು ಹಾಸನ ಕ್ಷೇತ್ರದ ಶಾಸಕ ಪ್ರೀತಂ ಜೆ.ಗೌಡ ಅವರಿಗೆ ತಿರುಗೇಟು ನೀಡಿದರು.

Advertisement

ರೇವಣ್ಣ ಅವರಹೊಳೆನರಸೀಪುರದ ಐಡಿಯಾ ಲಜಿ ಹಾಸನ ಕ್ಷೇತ್ರಕ್ಕೆ ಹೊಂದಾಣಿಕೆ ಆಗುವುದಿಲ್ಲ. ಅವರು ಹಾಸನ ಕ್ಷೇತ್ರದಿಂದ ಸ್ಪರ್ಧೆಗಿಳಿದರೆ 50 ಸಾವಿರ ಮತಗಳ ಅಂತರದಿಂದ ಸೋಲಿಸುವೆ ಎಂದು ಶಾಸಕ ಪ್ರೀತಂ ಜೆ.ಗೌಡ ಅವರು ಹೇಳಿದ್ದಕ್ಕೆ ಸುದ್ದಿಗೋಷ್ಠಿಯಲ್ಲಿ ರೇವಣ್ಣ ಅವರು ಪ್ರತಿಕ್ರಿಯಿಸಿದರು.

ಲೂಟಿ ಮಾಡುವ ಐಡಿಯಾಲಜಿ ನನಗೆ ಗೊತ್ತಿಲ್ಲ. ನನಗೆ ಐಡಿಯಾ ಇಲ್ಲದೆಯೇ ಏಷ್ಯಾದಲ್ಲಿಯೇ ಮಾದರಿ ಯಾದ ಬಸ್‌ ನಿಲ್ದಾಣವನ್ನು ಹಾಸನದಲ್ಲಿ ನಾನು ನಿರ್ಮಾಣ ಮಾಡಿಸಿದ್ದೇನೆ. ಹೈಕೋರ್ಟ್‌ ಮಾದರಿಯಲ್ಲಿಯೇ ಜಿಲ್ಲಾ ನ್ಯಾಯಾಲಯದ ಸಂಕಿರ್ಣ ನಿರ್ಮಾಣ, ಹಾಸನ – ಬೆಂಗಳೂರು ರೈಲು ಮಾರ್ಗ, ಹಾಸನ – ಮೈಸೂರು ರೈಲು ಮಾರ್ಗದ ಅಭಿವೃದ್ಧಿ, ಚನ್ನಪಟ್ಟಣ ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಹೊಸದಾಗಿ ಬಡಾವಣೆ ನಿರ್ಮಾಣ ಮಾಡಿ ಸಾವಿ ರಾರು ಮನೆಗಳ ನಿರ್ಮಾಣ ಮಾಡಿಸಿದ ಐಡಿಯಾ ಮಾತ್ರ ನನಗೆ ಗೊತ್ತು ಎಂದು ತಿರುಗೇಟು ನೀಡಿದರು.

ಮರ್ಯಾದೆ ಇದ್ದರೆ ಸ್ಥಳೀಯ ಚುನಾವಣೆ ನಡೆಸಿ: ಹಾಸನ ನಗರಾಭಿವೃದ್ಧಿ ಪ್ರಾಧಿಕಾರದಿಂದ ಹೊಸ ಬಡಾವಣೆ ನಿರ್ಮಾಣದ 1180 ಕೋಟಿ ರೂ. ಯೋ ಜನೆಯಲ್ಲಿ 100ಕೋಟಿ ರೂ. ಕಮಿಷನ್‌ ವಸೂಲಿಯಂತಹ ಐಡಿಯಾಲಿಗಳೆಲ್ಲ ನಮಗೆ ಗೊತ್ತಾಗಲ್ಲ. ಐಡಿಯಾಜಲಿ ಇರುವವರು 10 ವರ್ಷದಿಂದ ಹಾಸನ-ಸಕಲೇಶಪುರ ನಡುವಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಏಕೆ ಪೂರ್ಣಗೊಳಿಸಿಲ್ಲ? ಜಿಲ್ಲಾ ಮತ್ತು ತಾಪಂ ಚುನಾವಣೆಗಳನ್ನು ನಡೆಲು ಬಿಜೆಪಿ ಮುಖಂಡರಿಗೆ ಐಡಿ ಯಾ ಕೊಡಲಿ ಎಂದು ಪ್ರೀತಂ ಜೆ.ಗೌಡ ಅವರನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ಬಿಜೆಪಿಯವರಿಗೆ ಮಾನ ಮರ್ಯಾದೆ ಇದ್ದರೆ ಜಿಪಂ, ತಾಪಂಗಳಿಗೆ ಚುನಾವಣೆ ನಡೆಸಲಿ ಎಂದು ಆಗ್ರಹಪಡಿಸಿದರು.

ರೈತರ ಸಾಲ ಮನ್ನಾ ಮಾಡಿ: ಅತಿವೃಷ್ಟಿಯಿಂದ ರಾಜ್ಯದ ರೈತರು ಈ ವರ್ಷ ಭಾರೀ ನಷ್ಟ ಅನುಭವಿ ಸಿದ್ದಾರೆ. ಸರ್ಕಾರ ಒಂದು ಬಾರಿ ರಾ ಜ್ಯದ ಸಣ್ಣ ಮತ್ತು ಅತಿ ಸಣ್ಣ ರೈತರು ಕೃಷಿಗಾಗಿ ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕ್‌ಗಳಲ್ಲಿ ಮಾಡಿರುವ ಸಾಲವ ನ್ನು ಮನ್ನಾ ಮಾಡಲಿ ಎಂದು ರೇವಣ್ಣ ಅವರು ಒತ್ತಾಯಿಸಿದರು.

Advertisement

ಅಪಾರ ಬೆಳೆ ಹಾನಿ: ಹಾಸನ ಜಿಲ್ಲೆಯಲ್ಲಿ ಆಲೂಗಡ್ಡೆ, ಶುಂಠಿ , ತರಕಾರಿ ಬೆಳೆಗಳು ಬಹುತೇಕ ನಾಶವಾಗಿವೆ. ಮೆಕ್ಕೆ ಜೋಳದ ಬೆಳೆ ಹಸಿರಾಗಿದ್ದರೂ ನಿರಂತರ ಮಳೆಯಿಂದಾಗಿ ಕಾಳು ಕಟ್ಟದೆ ಬೆಳೆ ನಾಶವಾಗಿದೆ. ಕಂದಾಯ, ಕೃಷಿ, ತೋಟ ಗಾರಿಕೆ ಹಾಗೂ ಕಾಫಿ ಮಂಡಳಿ ಅಧಿಕಾರಿಗಳು ಪ್ರತಿ ತಾಲೂಕಿಗೂ ತೆರಳಿ ಬೆಳೆ ಹಾನಿಯ ಸಮೀಕ್ಷೆ ಮಾಡಬೇಕು. ಜಿಲ್ಲಾಧಿಕಾರಿಯವರನ್ನೂ ನಿನ್ನೆ ನಾನು ಭೇಟಿಯಾಗಿ ಬೆಳೆ ಹಾನಿ ಸಮೀಕ್ಷೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂ ದು ಮನವಿ ಮಾಡಿದ್ದೇನೆ ಎಂದರು.

ಹಿಂದಿನ ಜಿಲ್ಲಾಧಿಕಾರಿ ಆರ್‌ ಗಿರೀಶ್‌ ಅವರು ಒಂದು ತಿಂಗಳ ಹಿಂದೆಯೇ ಜಿಲ್ಲೆಯಲ್ಲಿ ಮಳೆಯಿಂದಾಗಿ 450 ಕೋಟಿ ರೂ.ಹಾನಿಯಾಗಿದೆ ಎಂದು ಹೇಳಿದ್ದರು. ಆನಂತರವೂ ಭಾರೀ ಪ್ರಮಾಣದ ಮಳೆಯಾಗಿದ್ದು, ನೂರಾರು ಕೋಟಿ ರೂ. ಬೆಳೆ, ಆಸ್ತಿಗೆ ಹಾನಿಯಾಗಿದೆ ಎಂದು ಹೇಳಿದರು.

ನೆರೆ ಹಾನಿ ಪರಿಹಾರ ಬಿಡುಗಡೆ ಮಾಡಲಿ : ರಾಜ್ಯದಲ್ಲಿ ಈ ವರ್ಷ ಹಿಂದೆಂದೂ ಕಾಣದಷ್ಟು ಮಳೆ ಸುರಿದಿದ್ದು, ರೈತರು ಬೆಳೆದಿದ್ದ ಎಲ್ಲ ಬೆಳೆಗಳೂ ಬಹುತೇಕ ನಾಶವಾಗಿವೆ. ಕೆರೆ-ಕಟ್ಟೆಗಳು ಒಡೆಯುವ ಆತಂಕ ಎದುರಾಗಿದೆ. ಮನೆಗಳು, ಶಾಲೆ ಮತ್ತು ಅಂಗನವಾಡಿ ಕಟ್ಟಡಗಳು ಕುಸಿದು ಬೀಳುತ್ತಿವೆ. ರಸ್ತೆಗಳು ಹಾಳಾಗಿವೆ. ಪರಿಹಾರ ಕಾರ್ಯಗಳಿಗೆ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ತಿಂಗಳಿಗೊಮ್ಮೆ ರಾಜ್ಯಕ್ಕೆ ಬರುವುದಾಗಿ ಹೇಳಿದ್ದಾರೆ. ಅವರು ತಿಂಗಳಿಗಲ್ಲ. 15 ದಿನಕ್ಕೊಮ್ಮೆ ಬರಲಿ. ರೈತರ ಸಂಕಷ್ಟವನ್ನು ಆಲಿಸಲಿ. ಅತಿವೃಷ್ಟಿ ಪರಿಹಾರ ಕಾರ್ಯಗಳಿಗೆ ಕೇಂದ್ರದಿಂದ ನೆರವು ಬಿಡುಗಡೆ ಮಾಡಲಿ ಎಂದು ರೇವಣ್ಣ ಅವರು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next