Advertisement

ಕೈ ಮನೆಬಾಗಿಲು ಕಾಯ್ಕೊಂಡು 250 ಓಟಿನಿಂದ ಗೆದ್ದಿದ್ದೀರಿ: HDK ಕಿಡಿ!

04:22 PM Mar 20, 2018 | Sharanya Alva |

ಬೆಂಗಳೂರು: ಕಾಂಗ್ರೆಸ್ ಮನೆಬಾಗಿಲು ಕಾಯ್ಕೊಂಡು 250 ಓಟಿನಿಂದ ಗೆದ್ದಿದ್ದೀರಿ. ಈಗ ಜೆಡಿಎಸ್ ವರಿಷ್ಠರ ಬಗ್ಗೆ ಏಕವಚನದಲ್ಲಿ ಮಾತನಾಡುತ್ತೀರಾ. ನೂರು ಸಿದ್ದರಾಮಯ್ಯ ಬಂದರೂ ಜೆಡಿಎಸ್ ಪಕ್ಷವನ್ನು ಮುಗಿಸಲು ಸಾಧ್ಯವಿಲ್ಲ..ಇದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಸಿಎಂ ಸಿದ್ದರಾಮಯ್ಯ ವಿರುದ್ಧ ನಡೆಸಿದ ವಾಗ್ದಾಳಿಯ ಪರಿ.

Advertisement

ಮಂಜೇಗೌಡರ ಜೊತೆ ಸಿಎಂ ಸಿದ್ದರಾಮಯ್ಯನವರ ಫೋನ್ ಸಂಭಾಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ಜೆಡಿಎಸ್ ಕಾರ್ಯಕರ್ತರ ಬೆನ್ನಿಗೆ ಚೂರಿ ಹಾಕಿದವರು ನೀವು. ಆರು ಕೋಟಿ ಮತದಾರರು ನಿಮ್ಮ ಜೇಬಿನಲ್ಲಿದ್ದಾರಾ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದ್ದಾರೆ.

ನಿಮಗೆ(ಸಿದ್ದರಾಮಯ್ಯ) ತಾಕತ್ತಿದ್ದರೆ ಪಕ್ಷೇತರರಾಗಿ ನಿಂತು ಗೆದ್ದು ತೋರಿಸಿ ಎಂದು ಕುಮಾರಸ್ವಾಮಿ ನೇರವಾಗಿ ಸವಾಲು ಹಾಕಿದ್ದಾರೆ.

ರಾಜ್ಯ ಸರ್ಕಾರಿ ನೌಕರರ ಅಧ್ಯಕ್ಷ ಮಂಜೇಗೌಡರಿಗೆ ರಾಜೀನಾಮೆ ನೀಡಲು ಹೇಳಿರುವ ದೂರವಾಣಿ ಸಂಭಾಷಣೆಯ ಆಡಿಯೋ ನಿನ್ನೆ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಏಯ್ ಮಂಜೇಗೌಡ ರಾಜೀನಾಮೆ ಕೊಟ್ಟು ಹೊಳೇನರಸಿಪುರಕ್ಕೆ ಹೋಗು, ಅಲ್ಲಿ ದೇವೇಗೌಡರ ಮಕ್ಕಳು ಗೆದ್ದಿದ್ದು ಸಾಕು ಎಂಬ ಸಂಭಾಷಣೆ ವೈರಲ್ ಆಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next