Advertisement

ಹೆಚ್‌.ಡಿ.ಕೋಟೆ: ಕಬಿನಿ ಹಿನ್ನಿರಿನಲ್ಲಿ ಮುಳುಗಿ ಮೂವರ ದುರ್ಮರಣ 

11:37 AM Apr 26, 2018 | Team Udayavani |

ಮೈಸೂರು: ಕೇರಳ ಗಡಿ ಭಾಗದ ಹೆಗ್ಗಡದೇವನಕೋಟೆ ತಾಲೂಕಿನಗೋಳೂರು ಮಸೀದಿ ಬಳಿ  ಕಬಿನಿ ಜಲಾಶಯದಲ್ಲಿ ಕೇರಳ ಮೂಲದಒಂದೇ ಕುಟುಂಬದ  ಮೂವರು ನೀರು ಪಾಲಾದ ಘಟನೆ ಗುರುವಾರ ನಡೆದಿದೆ. 

Advertisement

ಮೃತರು ಕಬಿನಿಗಿರಿ ನಿವಾಸಿಗಳಾದ ಚಾಲಕಲ್ ಬೇಬಿ(53), ಮಗ ಅಜಿತ್(24) ಮತ್ತು ಮಗಳು ಅನಿತಾ(18) ಎಂದು ತಿಳಿದು ಬಂದಿದೆ. 

ಅನಿತಾ ಜಾರಿ ಬಿದ್ದಾಗ ರಕ್ಷಿಸಲು ತೆರಳಿದ್ದ ವೇಳೆ ಉಳಿದಿಬ್ಬರು ನೀರಪಾಲಾಗಿದ್ದಾರೆ.  ಕಾರ್ಯಾಚರಣೆ ನಡೆಸಿ ಶವಗಳನ್ನು ಮೇಲಕ್ಕೆತ್ತಲಾಗಿದೆ. 

ಕೇರಳದ ಪಲಪ್ಪುಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next