Advertisement

ಜಮೀನು ಉಳುಮೆ ವಿಚಾರದಲ್ಲಿ ಗಲಾಟೆ : ತಮ್ಮನಿಂದ ಅಣ್ಣನ ಕೊಲೆ

01:04 PM Jun 20, 2020 | sudhir |

ಮೈಸೂರು ; ಜಮೀನಿನಲ್ಲಿ ಉಳುಮೆ ವಿಚಾರವಾಗಿ ಅಣ್ಣ ತಮ್ಮನ ನಡುವೆ ಮಾತಿಗೆ ಮಾತು ಬೆಳೆದು, ತಮ್ಮ ಅಣ್ಣನನ್ನೇ ಕೊಲೆಗೈದ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಹೈರಿಗೆ ಗ್ರಾಮದಲ್ಲಿ ಶನಿವಾರ ಸಂಭವಿಸಿದೆ.

Advertisement

ಮಹದೇವೇಗೌಡ (53) ತಮ್ಮನಿಂದ ಕೊಲೆಯಾದ ಮೃತ ದುರ್ದೈವಿ, ಆರೋಪಿ ಗಂಗಾಧರ ಸಣ್ಣ ಗಾಯಗಳೊಂದಿಗೆ ಪೋಲೀಸರ ವಶವಾಗಿದ್ದಾನೆ.

ಘಟನೆ ವಿವರ : ಮೃತ ಮಹದೇವೇಗೌಡರ ಹೆಸರಿನಲ್ಲಿ ಆರು ಎಕರೆ ಜಮೀನು ಇದ್ದು ಇದರ ಉಳುಮೆ ಮಾಡುವ ವಿಚಾರದಲ್ಲಿ ಅಣ್ಣ ತಮ್ಮನ ನಡುವೆ ಗಲಾಟೆ ಆರಂಭವಾಗಿದೆ ಹೀಗೆ ಮಾತಿಗೆ ಮಾತು ಬೆಳೆದು ತಮ್ಮ ಗಂಗಾಧರ್, ಅಣ್ಣ ಮಹದೇವೇಗೌಡ ಮೇಲೆ ಕುಡುಗೋಲುನಿಂದ ಹಲ್ಲೆ ಮಾಡಿ ಎದೆ ಭಾಗಕ್ಕೆ ಇರಿದು ಕೊಲೆ ಮಾಡಿದ್ದಾನೆ. ಘಟನೆಯಲ್ಲಿ ಆರೋಪಿ ಗಂಗಾಧರನಿಗೂ ಗಾಯಗಳಾಗಿವೆ.

ಸ್ಥಳಕ್ಕೆ ಎಚ್. ಡಿ. ಕೋಟೆ ಠಾಣೆ ಪೊಲೀಸರು ಆಗಮಿಸಿ ಆರೋಪಿ ಗಂಗಾಧರನನ್ನು ವಶೇಕ್ಕೆ ತೆಗೆದುಕೊಂಡು ಚಿಕಿತ್ಸೆಗಾಗಿ ಆಸ್ಪತೆಗೆ ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next