Advertisement

HC: ಅಬುಧಾಬಿಗೆ ಪ್ರಯಾಣಿಸಲು ಬಿ.ಆರ್‌. ಶೆಟ್ಟಿಗೆ ಹೈಕೋರ್ಟ್‌ನಿಂದ ಷ‌ರತ್ತುಬದ್ಧ ಅನುಮತಿ

08:35 PM Feb 09, 2024 | Pranav MS |

ಬೆಂಗಳೂರು: ಸಾಲ ಮರುಪಾವತಿಸದ ಆರೋಪದ ಹಿನ್ನೆಲೆಯಲ್ಲಿ ವಲಸೆ ಅಧಿಕಾರಿಗಳಿಂದ ವಿದೇಶ ಪ್ರಯಾಣ ನಿರ್ಬಂಧ ಎದುರಿಸುತ್ತಿರುವ ಉಡುಪಿ ಮೂಲದ ದುಬಾೖ ನಿವಾಸಿ, ಉದ್ಯಮಿ ಡಾ| ಬಿ.ಆರ್‌. ಶೆಟ್ಟಿ ಅವರಿಗೆ ಚಿಕಿತ್ಸೆ ಉದ್ದೇಶಕ್ಕಾಗಿ ಅಬುಧಾಬಿಗೆ ಪ್ರಯಾಣ ಮಾಡಲು ಹೈಕೋರ್ಟ್‌ ಷ‌ರತ್ತುಬದ್ಧ ಅನುಮತಿ ನೀಡಿದೆ.

Advertisement

ತಮ್ಮ ವಿರುದ್ಧ ವಲಸೆ ಅಧಿಕಾರಿಗಳು ಹೊರಡಿಸಿದ್ದ ಲುಕ್‌ಔಟ್‌ ಸಕ್ಯುìಲರ್‌ ಪ್ರಶ್ನಿಸಿ ಡಾ| ಶೆಟ್ಟಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ| ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, ಸಾಲ ಮರು ಪಾವತಿಸದ ಆರೋಪದಲ್ಲಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಮನವಿ ಮೇರೆಗೆ ವಲಸೆ ಅಧಿಕಾರಿಗಳು ಹೊರಡಿಸಿದ್ದ ಲುಕ್‌ಔಟ್‌ ಸಕ್ಯುಲರ್‌ ಅನ್ನು ಅಮಾನತಿನಲ್ಲಿಟ್ಟು, ಚಿಕಿತ್ಸೆ ಪಡೆಯಲು ಅಬುಧಾಬಿಗೆ ತೆರಳಲು ಷ‌ರತ್ತುಬದ್ಧ ಅನುಮತಿ ನೀಡಿತು.

ಯಾವುದೇ ತಾಂತ್ರಿಕ ಅಡ್ಡಿಗಳು ಇಲ್ಲದಿದ್ದರೆ ಅರ್ಜಿದಾರರು ತತ್‌ಕ್ಷಣ ವಿದೇಶಕ್ಕೆ ತೆರಳಬಹುದು. ಆದರೆ ಅರ್ಜಿದಾರರು ತಮ್ಮ ಒಡೆತನದಲ್ಲಿರುವ ಪ್ರಪಂಚದ ಯಾವುದೇ ಭಾಗದಲ್ಲಿರುವ ಆಸ್ತಿಗಳನ್ನು ಪರಭಾರೆ ಮಾಡುವುದಿಲ್ಲ ಎಂದು ಪ್ರಮಾಣ ಪತ್ರ ಸಲ್ಲಿಸಬೇಕು. ಕಾನೂನು ಪ್ರಕ್ರಿಯೆಗಳಿಗೆ ಅಗತ್ಯವಿದ್ದಲ್ಲಿ ಭಾರತಕ್ಕೆ ಮರಳಬೇಕು. ಅಧಿಕಾರಿಗಳ ಪೂರ್ವಾನುಮತಿ ಇಲ್ಲದೆ ವಿದೇಶಕ್ಕೆ ತೆರಳುವುದಿಲ್ಲ ಎಂದು ಪ್ರಮಾಣಪತ್ರ ಸಲ್ಲಿಸಬೇಕು ಎಂದು ಷರತ್ತು ವಿಧಿಸಿದೆ. ಜತೆಗೆ 1 ಕೋಟಿ ರೂ. ಮೊತ್ತದ ಶ್ಯೂರಿಟಿ ಒದಗಿಸಬೇಕು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಹೇಳಿದೆ.

 

Advertisement

Udayavani is now on Telegram. Click here to join our channel and stay updated with the latest news.

Next