Advertisement

Haveri; ಕರ್ಜಗಿ ಕಾರಹುಣ್ಣಿಮೆಯಲ್ಲಿ ಬಂಡಿ ಹರಿದು ವ್ಯಕ್ತಿ ದುರ್ಮರಣ

08:45 PM Jun 27, 2024 | Team Udayavani |

ಹಾವೇರಿ: ತಾಲೂಕಿನ ಐತಿಹಾಸಿಕ ಕರ್ಜಗಿ ಕಾರಹುಣ್ಣಿಮೆಯಲ್ಲಿ ಗುರುವಾರ ಅನಾಹುತವೊಂದು ಸಂಭವಿಸಿದ್ದು, ಬಂಡಿಯ ಚಕ್ರ ಹರಿದು ವ್ಯಕ್ತಿಯೊಬ್ಬ ದಾರುಣವಾಗಿ ಸಾವನ್ನಪ್ಪಿದ್ದಾನೆ.

Advertisement

ಬಂಡಿಯ ಗಾಲಿಗಳು ಹೊಟ್ಟೆ ಭಾಗದ ಮೇಲೆ ಹರಿದು ಹೋದ ಪರಿಣಾಮವಾಗಿ ಮಲ್ಲ‌ಪ್ಪ ಕಳ್ಳಿಹಾಳ (34) ದಾರುಣವಾಗಿ ಮೃತಪಟ್ಟಿದ್ದಾನೆ.

ಮೂರು ದಿನಗಳ ಕಾಲ ನಡೆಯುವ ಐತಿಹಾಸಿಕ ಕಾರುಹುಣ್ಣಿಮೆ ಜಾತ್ರೆ ಇದಾಗಿದ್ದು, ಬಂಡಿಯ ಚಕ್ರ ಮಲ್ಲ‌ಪ್ಪ ಮೈಮೇಲೆ ಹರಿದು ಹೋಗುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಭೀಕರ ದೃಶ್ಯ ಕಂಡು ಸಾವಿರಾರು ಭಕ್ತರು ಬೆಚ್ಚಿಬಿದ್ದಿದ್ದಾರೆ. ತತ್ ಕ್ಷಣ ಆಸ್ಪತ್ರೆಗೆ ಕರೆತಂದರೂ ಮಾರ್ಗ ಮಧ್ಯೆ ಸಾವನ್ನಪ್ಪಿದ್ದ ಎಂದು ತಿಳಿದು ಬಂದಿದೆ. ಹಾವೇರಿ ಗ್ರಾಮೀಣ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next