Advertisement

ಭರವಸೆಯ ಹೊಂಗಿರಣ ಬೀರಲಿ

02:57 AM Dec 24, 2021 | Team Udayavani |

ಕಡಬ: ಏಸು ಕಂದ ನಮ್ಮೆಲ್ಲರ ಹೃದಯವೆಂಬ ಗೋದಲಿಯಲ್ಲಿ ಹುಟ್ಟಿದಾಗ ಮಾತ್ರ ನಾವು ಆಚರಿಸುವ ಕ್ರಿಸ್ತ ಜಯಂತಿ ಹಬ್ಬವು ಸಾರ್ಥಕವಾಗುವುದು.

Advertisement

ಎಲ್ಲ ರೀತಿಯ ಅಭದ್ರತೆಗಳಿಂದ, ಕಷ್ಟ ಕಾರ್ಪಣ್ಯಗಳಿಂದ ನಮ್ಮ ಜೀವನವು ಬಿಡುಗಡೆ ಹೊಂದಲಿ. ಪ್ರತಿಯೊಬ್ಬರೂ ಶಾಂತಿಯ ದೂತರಾಗಿ ಏಸುವಿನ ಅನ್ವೇಷಣೆಗೆ ತೊಡಗೋಣ.

ವಿಶ್ವ ಶಾಂತಿಯ ಸಾಧಕರಾಗೋಣ, ಹೊಸ ವರುಷದಲ್ಲಿ ಕ್ರಿಸ್ತರ ಅನುಯಾಯಿಗಳು ಹಾಗೂ ಅನುರೂಪಿಗಳಾಗಿ ಹೊಸ ಬಾಳನ್ನು ಆರಂಭಿಸಿ ದೀನ ದಲಿತರೊಡನೆ ಸಮಾನತೆಯಿಂದ ಬಾಳ್ಳೋಣ. ಪರೋಪಕಾರಾರ್ಥಂ ಇದಂ ಶರೀರಂ ಎನ್ನುವ ದಿವ್ಯವಾಣಿಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳೋಣ.

ಮನುಷ್ಯತ್ವ ಹಾಗೂ ಮಾನ ವೀಯತೆ ಮರೀಚಿಕೆಯಾಗುವಂತಹ ಪ್ರಸ್ತುತ ಸಮಾಜದಲ್ಲಿ ದೇವರೂ, ಸಂಪೂರ್ಣ ಮಾನವರೂ ಆದ ಏಸು ಕ್ರಿಸ್ತರ ಜಯಂತಿ ಮಾನವ ಕುಲದ ಭಾವೈಕ್ಯತೆ ಹಾಗೂ ನೈತಿಕತೆ ಯನ್ನು ಜ್ಞಾಪಿಸುವಂತಾಗಲಿ. ಕಳೆದೆ ರಡು ವರ್ಷಗಳಿಂದ ಕೋವಿಡ್‌ ಮಹಾಮಾರಿ ಯಿಂದ ತತ್ತರಿಸಿರುವ ಸಂದರ್ಭ ಈ ವರ್ಷದ ಕ್ರಿಸ್ತ ಜಯಂತಿಯು ಜನತೆಗೆ ಭರವಸೆಯ ಹೊಂಗಿರಣ ಬೀರಲಿ.

2022ರ ಹೊಸ ವರ್ಷವು ಶಾಂತಿ, ನೆಮ್ಮದಿಯ ವರ್ಷವಾಗಲಿ. ಏಸು ನಮ್ಮ ಜೀವನದ ಅಮೂಲ್ಯ ನಿಧಿಯಾಗಿ ಬದುಕಿಗೆ ಅರ್ಥ, ಮೌಲ್ಯ, ಸುರಕ್ಷತೆ ಒದಗಿಸಿ ಶಾಂತಿ ದಯಪಾಲಿಸಲಿ ಎಂದುಪ್ರಾರ್ಥಿಸುತ್ತೇನೆ.
-ರೈ|ರೆ|ಡಾ| ಗೀವರ್ಗೀಸ್‌ ಮಾರ್‌ ಮಕಾರಿಯೋಸ್‌,
ಧರ್ಮಾಧ್ಯಕ್ಷರು, ಪುತ್ತೂರು ಧರ್ಮ ಪ್ರಾಂತ

Advertisement

 

Advertisement

Udayavani is now on Telegram. Click here to join our channel and stay updated with the latest news.

Next