Advertisement
ಜೂ. 30 ರಂದು ಗ್ರಾಮದ ವೃದ್ಧರೊಬ್ಬರಿಗೆ ಪಾಸಿಟಿವ್ ಇದೆ ಎಂದು ಇಡೀ ಗ್ರಾಮಸ್ಥರ ಮುಂದೆ ಆ್ಯಂಬುಲೆನ್ಸ್ ತಂದು ಕರೆದುಕೊಂಡು ಹೋಗಿ ಈಗ ಆರೋಗ್ಯವಾಗಿದ್ದಾರೆ ಎಂದು ವಾಪಸ್ ಕಳುಹಿಸಿದ್ದಾರೆ. ಈ ಘಟನೆಯಿಂದ ತಾಲೂಕು ಕೇಂದ್ರದ ಬ್ಯಾಂಕ್, ತರಕಾರಿ ಮಾರ್ಕೆಟ್, ಕಿರಾಣಿ ಸೇರಿದಂತೆ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಹತ್ತೂರು ಗ್ರಾಮಸ್ಥರು ಎಂದರೆ ದೂರ ಸರಿಯುತ್ತಾರೆ. ಅಲ್ಲದೆ ನಮ್ಮನ್ನು ಅನುಮಾನದ ದೃಷ್ಟಿಯಿಂದ ಕಾಣುತ್ತಿದ್ದಾರೆ. ಪರಿಸ್ಥಿತಿ ಈ ರೀತಿ ಇರಬೇಕಾದರೆ ಕೋವಿಡ್ ಸೋಂಕು ಇದೆ ಎಂದು ವ್ಯಕ್ತಿಯನ್ನು ಎಲ್ಲರ ಮುಂದೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಈಗ ಆರೋಗ್ಯವಾಗಿದ್ದಾರೆ ಎಂದು ವಾಪಸ್ ಕಳುಹಿಸಿದರೆ ನಮ್ಮ ಗ್ರಾಮದ ಗೌರವ ಏನಾಗಬೇಕು, ಬೇರೆ ಗ್ರಾಮಸ್ಥರು ನಮ್ಮ ಗ್ರಾಮಕ್ಕೆ ಬರುತ್ತಿಲ್ಲ. ಬಿತ್ತನೆ ಕಾಲ ಆಗಿರುವುದರಿಂದ ಬೇರೆ ರೈತರು ನಮ್ಮ ಗ್ರಾಮದ ಕಡೆ ಬರುತ್ತಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು.
Advertisement
ಆರೋಗ್ಯ ಇಲಾಖೆ ವಿರುದ್ಧ ಹತ್ತೂರು ಗ್ರಾಮಸ್ಥರು ಕಿಡಿ
10:14 AM Jul 05, 2020 | Suhan S |
Advertisement
Udayavani is now on Telegram. Click here to join our channel and stay updated with the latest news.