Advertisement

ಹಾಸನ: ಮತ್ತೆ 6 ಕೋವಿಡ್‌ 19 ಸೋಂಕು ಪತ್ತೆ

06:41 AM May 18, 2020 | Lakshmi GovindaRaj |

ಹಾಸನ: ಜಿಲ್ಲೆಯಲ್ಲಿ ಪ್ರತಿ ದಿನವೂ ಕೋವಿಡ್‌ 19 ಪಾಸಿಟಿವ್‌ ಪ್ರಕರಣ ವರದಿ ಯಾಗುತ್ತಿದ್ದು, ಭಾನುವಾರ ಮತ್ತೆ 6 ಹೊಸ ಪ್ರಕರಣಗಳು ಪತ್ತೆಯಾಗಿ ಸೋಂಕಿತರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ. ಕೋವಿಡ್‌ 19 ಸೋಂಕಿತರಲ್ಲರೂ ಮಹಾರಾಷ್ಟ್ರದಿಂದ ಹಾಸನ ಜಿಲ್ಲೆಗೆ ಬರುತ್ತಿದ್ದಾಗಲೇ ಅವರೆಲ್ಲರನ್ನೂ ಗಡಿ ಭಾಗದಲ್ಲಿಗೆ ಪತ್ತೆ ಮಾಡಿ ಕ್ವಾರಂಟೈನ್‌ ಮಾಡಲಾಗಿತ್ತು. ಶನಿವಾರ ಪರೀಕ್ಷಾ ವರದಿ ಬಾಕಿ ಇದ್ದ 31 ಜನರಲ್ಲಿ ಆರು ಮಂದಿಗೆ  ಸೋಂಕು ದೃಢಪಟ್ಟಿದೆ  ಇನ್ನುಳಿದ 25 ಮಂದಿಯ ವರದಿಗಾಗಿ ಕಾಯಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಅವರು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.

Advertisement

ಮುಂಬೈನಿಂದ ಬಂದವರಲ್ಲೇ ಸೋಂಕು: ಸೇವಾ ಸಿಂಧು ಆ್ಯಪ್‌ ಮೂಲಕ ಪಾಸ್‌ ಪಡೆದು ಮುಂಬೈನಿಂದ ಹಾಸನಕ್ಕೆ ಬರು ತ್ತಿರುವವರಲ್ಲಿ ಸೋಂಕು ಪತ್ತೆ ಹೆಚ್ಚಾಗಿದೆ. ಭಾನುವಾರ ಪತ್ತೆಯಾದ ಪಾಸಿಟಿವ್‌ ಪ್ರಕರಣಗಳಲ್ಲಿ ಇಬ್ಬರು ಚನ್ನರಾಯಪಟ್ಟಣ ತಾಲೂಕಿನ ಮೂಲದವರಾಗಿದ್ದು, ಮೂವರು ಆಲೂರು ತಾಲೂಕಿನವರು  ಹಾಗೂ ಒಬ್ಬರು ಹೊಳೆನರಸೀಪುರ ತಾಲೂಕಿಗೆ ಸೇರಿದವವರು.

ಆಲೂರು ತಾಲೂಕಿನಲ್ಲಿ  ಒಂದೇ ಕುಟುಂಬದ ಪತಿ, ಪತ್ನಿ ಮತ್ತು ಮಗುನಲ್ಲಿ ಸೋಂಕು ಪತ್ತೆಯಾಗಿದೆ. ಅವರೆಲ್ಲರೂ ಸ್ವಂತ ಲಾರಿಯಲ್ಲಿ ಹಾಸನ ಜಿಲ್ಲೆಗೆ ಬಂದಿದ್ದರು.  ಪುಣೆಯಿಂದ ಟಿಟಿ ವಾಹನದಲ್ಲಿ ಬಂದಿದ್ದ 15 ಮಂದಿಯಲ್ಲಿ ತುಮಕೂರಿಗೆ ಸೇರಿದವರು 10 ಜನ ಮತ್ತು ಚನ್ನರಾಯಪಟ್ಟಣಕ್ಕೆ ಸೇರಿದ 5 ಜನರಲ್ಲಿ ಒಬ್ಬರಿಗೆ ಸೋಂಕು ಪತ್ತೆಯಾಗಿದೆ. ಮುಂಬೈನಿಂದ ಬಂದಿರುವ 13 ಮಂದಿಯಲ್ಲಿ ಒಬ್ಬರಿಗೆ ಪಾಸಿಟಿವ್‌ ಪತ್ತೆಯಾಗಿದೆ ಮತ್ತು ಹೊಳೆನರಸೀಪುರ ತಾಲೂಕಿನ ಮೂಲದವ ರಲ್ಲಿ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ ಎಂದು ತಿಳಿಸಿದರು.

ಬಿಹಾರಕ್ಕೆ ತೆರಳಿದ ಕಾರ್ಮಿಕರು: ಹಾಸನ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದ ವಿವಿಧ ಕಾರ್ಮಿಕರು ತಮ್ಮ ಸ್ವಸ್ಥಾನಕ್ಕೆ ಹೋಗಲು ಇಚ್ಛಿಸುತ್ತಿದ್ದು ಅವರನ್ನು ಬಿಹಾರದ ಕತ್ತಿಹಾರ ಎಂಬ ಪ್ರದೇಶಕ್ಕೆ ರೈಲಿನ ಮೂಲಕ ಕಳುಹಿಸಲಾಗುತ್ತಿದೆ. ಅವರೆಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು. ಜಿಲ್ಲಾ ಆರೋಗ್ಯ ಮತ್ತು  ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ಸತೀಶ್‌ ಕುಮಾರ್‌ ಅವರು ಹಾಜರಿದ್ದರು.

ಕೋವಿಡ್‌ 19 ಸೋಂಕಿತರಿಗೆ ಚಿಕಿತ್ಸೆ: ಜಿಲ್ಲೆಯಲ್ಲಿ ಚನ್ನರಾಯಪಟ್ಟಣ ತಾಲೂಕಿಗೆ ಅಗಮಿಸಿದವರಲ್ಲಿ ಹೆಚ್ಚು ಸೋಂಕು ಪ್ರಕರಣಗಳು ಬೆಳಕಿಗೆ ಬಂದಿವೆ. ಜಿಲ್ಲೆಯಲ್ಲಿ ಈ ವರಗೆ 26 ಪ್ರಕರಣಗಳು ದಾಖಲಾಗಿವೆ. ಎಲ್ಲಾ ಸೋಂಕಿತರನ್ನು ಹಾಸನದ ಕರೊನಾ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಶಂಕಿತರನ್ನು ಆಯಾ ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ನಿಲಯಗಳಲ್ಲಿ ಸಾಂಸ್ಥಿಕ ಕ್ವಾರಂಟೈನ್‌ ಮಾಡಲಾಗಿದೆ. ಎಲ್ಲರೂ ನೇರವಾಗಿ ಆಸ್ಪತ್ರೆ ಕ್ವಾರಂಟೈನ್‌  ಕೇಂದ್ರಗಳಿಗೆ ಬಂದಿದ್ದರಿಂದ ಜಿಲ್ಲೆಯಲ್ಲಿ ಸೋಂಕು ಹರಡುವ ಯಾವುದೇ ಆತಂಕವಿಲ್ಲ ಎಂದು ಜಿಲ್ಲಾಧಿಕಾರಿ ಆರ್‌. ಗಿರೀಶ್‌ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next