Advertisement

ಭೂ ಪರಿಹಾರ ಶೀಘ್ರ ಪಾವತಿಗೆ ಸೂಚನೆ

07:51 PM Jun 17, 2021 | Team Udayavani |

ಹಾಸನ: ಯಗಚಿ ಜಲಾಶಯ ಯೋಜನೆಯನಾಲೆಗಳೂ ಸೇರಿದಂತೆ ಬಾಕಿ ಇರುವ ಕಾಮಗಾರಿಗಳಿಗೆಸಂಬಂಧಿಸಿದಂತೆ ಸ್ವಾಧೀನಪಡಿಸಿಕೊಂಡಿರುವ ಭೂಮಿಗೆ ಶೀಘ್ರವಾಗಿ ಭೂ ಪರಿಹಾರ ನೀಡಬೇಕೆಂದು ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರಭೂಸ್ವಾಧೀನ ಹಂತದ ಪ್ರಗತಿ ಪರಿಶೀಲನಾ ಸಭೆನಡೆಸಿದ ಅವರು, ಭೂಮಾಲೀಕರಿಗೆ ಪರಿಹಾರ ನೀಡಿಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕೆಂದು ನಿರ್ದೇಶಿಸಿದರು.

ನೀರಾವರಿ ಯೋಜನೆಗಳಿಂದಶೀತಪೀಡಿತ ಪ್ರದೇಶಗಳ ಮನೆಗಳ ನಿವಾಸಿಗಳಿಗೆಪುನರ್ವಸತಿ ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ಭೂಸ್ವಾಧೀನಕ್ಕೆ ಒಳಪಟ್ಟಿರುವ ಆಯಾ ವ್ಯಾಪ್ತಿಯಲ್ಲಿಯೋಜನೆ ಪ್ರದೇಶಗಳ ಬಗ್ಗೆ ಮುತುವರ್ಜಿ ವಹಿಸಿಭೂಮಾಲೀಕರೊಂದಿಗೆ ಸಮನ್ವಯ ಸಾಧಿಸಲುಕಂದಾಯ ಇಲಾಖೆಯ ಗ್ರಾಮಲೆಕ್ಕಿಗರ ನೆರವುಪಡೆಯಲು ಜಿಲ್ಲಾಧಿಕಾರಿಯವರು ಅಧಿಕಾರಿಗಳಿಗೆಸೂಚನೆ ನೀಡಿದರು.

ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ವಿಶೇಷಭೂ ಸ್ವಾಧೀನ ಅಧಿಕಾರಿ ಮಂಜುನಾಥ್‌ ಮತ್ತಿತರಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next