Advertisement

ಪ್ರಾಣ ಉಳಿಸಿದ ಚಾಲಕನಿಗೆ ಗಣರಾಜ್ಯೋತ್ಸವ ಗೌರವ

10:37 PM Jan 01, 2023 | Team Udayavani |

ಡೆಹ್ರಾಡೂನ್: ಭೀಕರ ರಸ್ತೆ ಅಪಘಾತದಲ್ಲಿ ಕ್ರಿಕೆಟಿಗ ರಿಷಭ್‌ ಪಂತ್‌ ಅವರನ್ನು ಬಚಾವ್‌ ಮಾಡಿದ ಹರ್ಯಾಣ ಸಾರಿಗೆ ಸಂಸ್ಥೆಯ ಚಾಲಕ ಸುಶೀಲ್‌ ಕುಮಾರ್‌ ಮಾನ್‌ ಅವರಿಗೆ ದೊಡ್ಡ ಗೌರವವೊಂದು ಕಾದಿದೆ. ಮುಂದಿನ ಗಣರಾಜ್ಯೋತ್ಸವ ದಿನದಂದು ಉತ್ತರಾಖಂಡ ಸರಕಾರ ಮಾನ್‌ ಅವರನ್ನು ಸಮ್ಮಾನಿಸಲು ನಿರ್ಧರಿಸಿದೆ.

Advertisement

ಶುಕ್ರವಾರ ಮುಂಜಾನೆ ಡೆಲ್ಲಿ-ಡೆಹ್ರಾಡೂನ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಘೋರ ಅಪಘಾತವನ್ನು ಕಂಡು ಬಸ್‌ ನಿಲ್ಲಿಸಿ ನೆರವಿಗೆ ಧಾವಿಸಿದ ಸುಶೀಲ್‌ ಕುಮಾರ್‌ ಮಾನ್‌ ಜೀವದ ಹಂಗು ತೊರೆದು ರಿಷಭ್‌ ಪಂತ್‌ ಅವರನ್ನು ಉಳಿಸಿದ್ದರು. ಬಸ್‌ ನಿರ್ವಾಹಕ ಪರಮ್‌ಜೀತ್‌, ಪ್ರಯಾಣಿಕರೂ ನೆರವಿಗೆ ಧಾವಿಸಿದ್ದರು.

ಡಿವೈಡರ್‌ಗೆ ಬಡಿದ ರಭಸಕ್ಕೆ ಕಾರು ಹೈವೇಯ ಇನ್ನೊಂದು ಬದಿಗೆ ಹೋಗಿ ಬಿದ್ದಿತ್ತು. ಕಾರಿಗೆ ಬೆಂಕಿ ಹೊತ್ತಿಕೊಂಡಿತ್ತು. ಕೂಡಲೇ ಪಂತ್‌ ಅವರನ್ನು ಕಾರಿನಿಂದ ಹೊರಗೆಳೆದ ಮಾನ್‌, ಅಂಬ್ಯುಲೆನ್ಸ್‌ ಮತ್ತು ಪೊಲೀಸರಿಗೆ ಕರೆ ಮಾಡಿ ಕ್ರಿಕೆಟಿಗನನ್ನು ಸಕಾಲದಲ್ಲಿ ಆಸ್ಪತ್ರೆಗೆ ದಾಖಲಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಇವರ ಆಪತ್ಭಾಂದವನ ಪಾತ್ರ ದೇಶಾದ್ಯಂತ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next