Advertisement

ಹರ್ಯಾಣಕ್ಕೆ ಪ್ರವೇಶಿಸಿದ ಮಿಡತೆಗಳ ಹಿಂಡು

10:32 AM Jun 28, 2020 | sudhir |

ಗುರುಗ್ರಾಮ: “ಬೆಳೆ ಭಕ್ಷಕ’ ಮರು ಭೂಮಿ ಮಿಡತೆಗಳು ಈಗ ಹರ್ಯಾಣ ಪ್ರವೇಶಿಸಿವೆ. ಪಾಕಿಸ್ಥಾನ­ದಿಂದ ರಾಜಸ್ಥಾನ, ಮಹಾರಾಷ್ಟ್ರ, ಉತ್ತರಪ್ರದೇಶಕ್ಕೆ ಧಾವಿಸಿದ್ದ ಮಿಡತೆಗಳು ಶನಿವಾರ ಹರಿಯಾಣದ ಗುರು ಗ್ರಾಮದಲ್ಲಿ ಕಾಣಿಸಿಕೊಂಡಿವೆ. ಅಸಂಖ್ಯ ಮಿಡತೆಗಳ ಹಿಂಡು ಮರಗಳ ಮೇಲೆ, ಮನೆಗಳ ಬಾಲ್ಕನಿಯಲ್ಲಿ ಬೀಡು ಬಿಟ್ಟಿವೆ. ಜನರು ತಮ್ಮ ಮನೆಗಳ ಬಾಗಿಲು ಹಾಗೂ ಕಿಟಕಿಗಳನ್ನು ಮುಚ್ಚಿದ್ದಾರೆ. ಇನ್ನೂ ಕೆಲವರು, ಈ ಮಿಡತೆಗಳ ಫೋಟೋ ಹಾಗೂ ವಿಡಿಯೋಗಳನ್ನು ತೆಗೆದು ಸಾಮಾಜಿಕ ಜಾಲತಾಣ­ಗಳಲ್ಲಿ ಶೇರ್‌ ಮಾಡಿ ಕೊಳ್ಳುತ್ತಿದ್ದಾರೆ.

Advertisement

ಮಿಡತೆ ಹಾವಳಿ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಡಳಿತ, ಮನೆಗಳ ಹತ್ತಿರ ಮಿಡತೆಗಳು ಬಂದರೆ ಪಾತ್ರೆ ಮತ್ತಿತರ ವಸ್ತುಗಳಿಂದ ಶಬ್ದ ಮಾಡಬೇಕು. ಅಲ್ಲದೇ ರೈತರು ಕ್ರಿಮಿನಾಶಕ ಸಿಂಪಡಣೆ ಡ್ರಮ್‌ ಸೆಟ್‌ಗಳನ್ನು ಇಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದೆ. ಪಾಕಿಸ್ಥಾನದ ಗಡಿ ಭಾಗದಿಂದ ಬಂದಿರುವ ಈ ಮಿಡತೆಗಳ ಹಿಂಡು ಕೆಲ ದಿನಗಳ ಹಿಂದೆ ಮಹಾರಾಷ್ಟ್ರ, ರಾಜಸ್ಥಾನ, ಪಂಜಾಬ್‌, ಉತ್ತರಪ್ರದೇಶದಲ್ಲಿ ಕಾಣಿಸಿ­ಕೊಂಡಿ­ದ್ದವು. ಮುಂದೆ ರಾಷ್ಟ್ರ ರಾಜಧಾನಿ ದೆಹಲಿಗೂ ಧಾವಿಸುವ ಸಾಧ್ಯತೆ ಇದೆ. ಇತ್ತೀಚೆಗೆ ರಾಜಸ್ಥಾನದಲ್ಲಿ ಡ್ರೋನ್‌ ಮೂಲಕ ಕ್ರಿಮಿನಾಶಕ ಸಿಂಪಡಿಸಿ ಮಿಡತೆ­ಗಳನ್ನು ಕೊಲ್ಲಲಾಗಿತ್ತು. ಮಿಡತೆಗಳ ನಿಯಂತ್ರಣಕ್ಕಾಗಿ ಕೇಂದ್ರ ಸರಕಾರ 11 ಕೇಂದ್ರಗಳನ್ನು ತೆರೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next