Advertisement

ಮಾರ್ಚ್‌ 12 ರಂದು ಹಾರ್ದಿಕ್‌ ಪಟೇಲ್‌ ಕೈ ಸೇರ್ಪಡೆ;ಲೋಕಸಭೆಗೆ ಸ್ಪರ್ಧೆ

01:53 PM Mar 07, 2019 | |

ಹೊಸದಿಲ್ಲಿ: ಪಾಟೀದಾರ್‌ ಅನಾಮತ್‌ ಆಂದೋಲನ ಸಮಿತಿಯ ಹೋರಾಟಗಳ ಮೂಲಕ ರಾಷ್ಟ್ರದ ಗಮನ ಸೆಳೆದಿದ್ದ ಹಾರ್ದಿಕ್‌ ಪಟೇಲ್‌ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್‌ ಸೇರ್ಪಡೆಯಾಗುವುದು ಖಚಿತವಾಗಿದೆ. 

Advertisement

ಕಾಂಗ್ರೆಸ್‌ನ ಉನ್ನತ ನಾಯಕರು ಪಿಟಿಐಗೆ ನೀಡಿರುವ ಮಾಹಿತಿಯಂತೆ, ಮಾರ್ಚ್‌ 12 ರಂದು ಹಾರ್ದಿಕ್‌ ಕಾಂಗ್ರೆಸ್‌ಗೆ ಸೇರ್ಪಡೆಯಾಗಲಿದ್ದಾರೆ. ಜಾಮ್‌ನಗರ್‌ ಲೋಕಸಭಾ ಕ್ಷೇತ್ರದಿಂದ ಅವರು ಕಣಕ್ಕಿಳಿಯಲಿದ್ದಾರೆ ಎಂದು ತಿಳಿಸಿದ್ದಾರೆ.

ಪಾಟೀದಾರ್‌ ಸಮುದಾಯಕ್ಕೆ  ಮೀಸಲಾತಿಕ್ಕೆ ಆಗ್ರಹಿಸಿ ಭಾರೀ ಹೋರಾಟ ಸಂಘಟಿಸಿದ್ದ ಹಾರ್ದಿಕ್‌ ಅವರನ್ನು  ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಪಕ್ಷಕ್ಕೆ ಬರಮಾಡಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. 

ಪೂನಮ್‌ ಬೆನ್‌ ಅವರು ಜಾಮ್‌ನಗರ ಕ್ಷೇತ್ರದ ಹಾಲಿ ಸಂಸದೆ,ಹಾರ್ದಿಕ್‌ ಸ್ಪರ್ಧೆಯಿಂದ ಕ್ಷೇತ್ರದಲ್ಲಿ ಜಿದ್ದಾಜಿದ್ದಿನ ಕದನ ಏರ್ಪಡುವ ಎಲ್ಲಾ ಸಾಧ್ಯತೆಗಳಿವೆ. 

ಕಾಂಗ್ರೆಸ್‌ ಪ್ರಧಾನಿ ಮೋದಿ ಅವರ ತವರು ಗುಜರಾತ್‌ನಲ್ಲಿ ಪ್ರಬಲ ಸ್ಪರ್ಧೆ ನೀಡಲು ಸಿದ್ದತೆ ನಡೆಸಿದೆ. ಹಾರ್ಧಿಕ್‌ ಅವರೊಂದಿಗೆ ಇನ್ನೂ ಕೆಲ ಪಾಟೀದಾರ್‌ ಹೋರಾಟ ಸಮಿತಿಯ ಮುಖಂಡರು ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ತಿಳಿದು ಬಂದಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next