Advertisement

Harassment: ಫ್ಲ್ಯಾಟ್‌ನಲ್ಲಿ ಕಿರುಕುಳ; ದಂಪತಿ ವಿರುದ್ಧ ಕೇಸ್‌

12:18 PM Apr 01, 2024 | Team Udayavani |

ಬೆಂಗಳೂರು: ಉದ್ದೇಶಪೂರ್ವಕವಾಗಿ ಮನೆ ಮುಂದಿನ ರಂಗೋಲಿ ಅಳಿಸುವುದು, ಚಪ್ಪಲಿ ಸ್ಟಾಂಡ್‌ ಉರುಳಿಸಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ದಂಪತಿ ವಿರುದ್ಧ ಬೊಮ್ಮನಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

ಕೋಡಿಚಿಕ್ಕನಹಳ್ಳಿಯ ಖಾಸಗಿ ಅಪಾರ್ಟ್‌ ಮೆಂಟ್‌ ನಿವಾಸಿ ಎನ್‌.ಬಿ.ಮಂಜುನಾಥ್‌ ಎಂಬವರು ನೀಡಿದ ದೂರಿನ ಮೇರೆಗೆ ಪೊಲೀಸರು ಅದೇ ಅಪಾರ್ಟ್‌ಮೆಂಟ್‌ ನಿವಾಸಿಗಳಾದ ಪ್ರಣಬ್‌ ಜ್ಯೋತಿ ಸಿಂಗ್‌ ಮತ್ತು ನೇಹಾ ಕುಮಾರಿ ದಂಪತಿ ವಿರುದ್ಧ ಗಂಭೀರ ಸ್ವರೂಪವಲ್ಲದ(ಎನ್‌ಸಿಆರ್‌) ಪ್ರಕರಣ ದಾಖಲಿಸಿದ್ದಾರೆ.

ಮಂಜುನಾಥ್‌ ದಂಪತಿ, ಪ್ರಣಬ್‌ ದಂಪತಿ ಕೋಡಿಚಿಕ್ಕನಹಳ್ಳಿ ಅಪಾರ್ಟ್‌ಮೆಂಟ್‌ನ ಅಕ್ಕಪಕ್ಕದ ನಿವಾಸಿಗಳಾಗಿದ್ದು ಪ್ರಣಬ್‌ ದಂಪತಿ ಅನಗತ್ಯವಾಗಿ ಮಂಜು ನಾಥ್‌ ದಂಪತಿಗೆ ಕಿರುಕುಳ ನೀಡುತ್ತಿದ್ದರು. ಈ ವಿಚಾರವಾಗಿ ಮಂಜುನಾಥ್‌ ಎರಡು ಬಾರಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಈ ವೇಳೆ ಪೊಲೀಸರು ಎರಡೂ ಕುಟುಂಬದವರನ್ನು ಕರೆಸಿ ವಿಚಾರಣೆ ನಡೆಸಿ ಬುದ್ಧಿ ಹೇಳಿ ಕಳುಹಿಸಿದ್ದರು. ಆದರೂ ಆರೋಪಿತ ಪ್ರಣಬ್‌ ದಂಪತಿ, ಮಂಜು ನಾಥ್‌ ಕುಟುಂಬದ ಬಗ್ಗೆ ಉದ್ದೇಶಪೂರ್ವಕ ವಾಗಿಯೇ ಮತ್ತೆ ಕಿರುಕುಳ ನೀಡಲು ಆರಂಭಿಸಿದ್ದಾರೆ.

ಅದರಂತೆ ಮಾ.27ರಂದು ರಾತ್ರಿ ಮಂಜು ನಾಥ್‌ ಮನೆ  ಮಂಭಾಗದ ಹಾಕಿದ್ದ ರಂಗೋಲಿ ಯನ್ನು ಅಳಿಸಿದ್ದರು. ಮಾ.28ರಂದು ಚಪ್ಪಲಿ ಸ್ಟಾಂಡ್‌ ಬೀಳಿಸಿದ್ದಾರೆ. ಹೀಗಾಗಿ ಮಂಜುನಾಥ್‌ ದಂಪತಿ ಆ ಚಪ್ಪಲಿಗಳನ್ನು ಪಕ್ಕಕ್ಕೆ ಸರಿಸಿದ್ದರು. ಅದರಿಂದ ಕೋಪಗೊಂಡ ನೇಹಾಕುಮಾರಿ, ಮಂಜುನಾಥ್‌ ಮನೆ ಎದುರಿನ ರಂಗೋಲಿ ಅಳಿಸಿ ಹಾಕಿ, ಚಪ್ಪಲಿ ಸ್ಟಾಂಡ್‌ಗೆ ಕಾಲಿನಿಂದ ಒದ್ದು ಉರು ಳಿಸಿ ರಂಪಾಟ ಮಾಡಿದ್ದಾರೆ. ನೇಹಾಕುಮಾರಿಯ ರಂಪಾಟ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next