Advertisement

Udupi ಪತ್ನಿಗೆ ಕಿರುಕುಳ, ಹಲ್ಲೆ : ದೂರು

12:49 AM Jul 20, 2024 | Team Udayavani |

ಉಡುಪಿ: ಬೊಮ್ಮರಬೆಟ್ಟು ಗ್ರಾಮದ ಪ್ರಶಾಂತಿ ಅವರು ಪತಿ, ವಂಡಾರು ನಿವಾಸಿ ಮಂಜುನಾಥ್‌ನ ವಿರುದ್ಧ ಮಹಿಳಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Advertisement

ಇವರ ಮದುವೆ 2023ರಲ್ಲಿ ಪೆರ್ಡೂರು ಸುಬ್ರಾಯ ಕಲ್ಯಾಣ ಮಂಟಪದಲ್ಲಿ ಹಿರಿಯರ ಸಮಕ್ಷಮದಲ್ಲಿ ನೆರವೇರಿತ್ತು. ಮಂಜುನಾಥ್‌ಗೆ ಈ ಹಿಂದೆ ಬೇರೊಂದು ಮದುವೆಯಾಗಿ ವಿಚ್ಛೇದನ ಪಡೆದುಕೊಂಡಿದ್ದ.

ಪ್ರಶಾಂತಿಗೆ ಮಂಜುನಾಥ್‌ ಕಿರುಕುಳ ನೀಡಿದ್ದ ಬಗ್ಗೆ ಮಹಿಳಾ ಪೊಲೀಸ್‌ ಠಾಣೆ ಹಾಗೂ ಹಿರಿಯಡಕ ಠಾಣೆಗೆ ದೂರು ನೀಡಲಾಗಿತ್ತು. ಜು.17ರಂದು ಹಿರಿಯಡಕ ಪೊಲೀಸರು ದೂರಿನ ವಿಚಾರಣೆ ಬಗ್ಗೆ ಆರೋಪಿ ಕೆಲಸ ಮಾಡುವ ಬ್ರಹ್ಮಾವರದ ಅಂಗಡಿ ಬಳಿ ತೆರಳಿದಾಗ, ಪ್ರಶಾಂತಿ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಉಡುಪಿ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next