Advertisement

Kasaragod: ಮನೆಗೆ ಬೆಂಕಿ ಹಚ್ಚಿ ಕೊಲೆಗೆ ಯತ್ನ: ಬಂಧನ

08:11 PM Sep 05, 2024 | Team Udayavani |

ಉಪ್ಪಳ: ಮನೆಗೆ ಬೆಂಕಿ ಹಚ್ಚಿ ಕುಟುಂಬ ಸದಸ್ಯರ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ವಯನಾಡು ಚುಂಡಲ್‌ ನಿವಾಸಿ ಶಿವ ಕುಮಾರ್‌(45)ನನ್ನು ಮಂಜೇಶ್ವರ ಪೊಲೀಸರು ಕಲ್ಲಿಕೋಟೆ ಪಾಳಯಂನಿಂದ ಬಂಧಿಸಿದ್ದಾರೆ.

Advertisement

ಆ.23ರಂದು ಮಂಜೇಶ್ವರ ಉದ್ಯಾವರ ಗುತ್ತಿನ ಐತ್ತಪ್ಪ ಅವರ ಮನೆಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಕುಟುಂಬ ಸದಸ್ಯರನ್ನು ಕೊಲೆಗೈಯಲೆತ್ನಿಸಿದ ಆರೋಪದಂತೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next