Advertisement

ಬನಾನಾ ಹರಕೆ, ಡಬ್ಬಿಂಗ್‌ ಗಾನಾಬಜಾನಾ!

03:54 PM Feb 27, 2023 | Team Udayavani |

ರಾಯಚೂರು: ಚುನಾವಣೆ ಎಂದರೆ ಎಷ್ಟು ಗಂಭೀರ ವಿಷಯವೋ ಅಷ್ಟೇ ಸ್ವಾರಸ್ಯಕರ-ವಿನೋದ ಭರಿತ ಸಂಗತಿಗೂ ಸಾಕ್ಷಿಯಾಗುತ್ತದೆ. ಇದಕ್ಕೊಂದು ಸೇರ್ಪಡೆ ಬಾಳೆಹಣ್ಣಿನ ಹರಕೆ ಟ್ರೆಂಡ್‌!

Advertisement

ಸಾಮಾನ್ಯವಾಗಿ ಏಪ್ರಿಲ್‌-ಮೇ ತಿಂಗಳು ಜಾತ್ರೆ ಸಮಯ ಎಂದೇ ಕರೆಯಲಾಗುತ್ತದೆ. ಇಂಥ ಜಾತ್ರೆಗಳಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನ ಗೆಲುವಿಗಾಗಿ ಬಾಳೆಹಣ್ಣಿನ ಮೇಲೆ ಹೆಸರು ಬರೆದು ರಥಕ್ಕೆ ಎಸೆ ಯುವ ಹೊಸ ಪದ್ಧತಿ ಶುರುವಾಗಿದೆ. ಇದು ಎಲ್ಲೋ ಒಂದೆರಡು ಕಡೆ ನಡೆಯುತ್ತಿರುವ ಸಂಗತಿ ಯಲ್ಲ. ಪ್ರತಿ ಊರಲ್ಲೂ ಈ ರೀತಿಯ ಹರಕೆ ಸಾಮಾನ್ಯವಾಗುತ್ತಿದೆ. ಅಷ್ಟು ಮಾತ್ರವಲ್ಲ ಅದನ್ನು ಫೋಟೋ ತೆಗೆದು, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಾರೆ. ನಮ್ಮ ಮುಂದಿನ ಎಂಎಲ್‌ಎ ಇವರೇ’ ಎಂದು ಹೆಸರು ಬರೆಯುವುದು ಉಚ್ಛಾಯಗಳಿಗೆ, ರಥಗಳಿಗೆ ಎಸೆದು ಹರಕೆ ತೀರಿಸುವುದೇ ಎಲ್ಲ ಪಕ್ಷಗಳ ಕಾರ್ಯಕರ್ತರಿಗೆ ಕಾಯಕವಾಗಿ ಬಿಟ್ಟಿದೆ.

ಡಬ್ಬಿಂಗ್‌ ಗಾನಬಜಾನಾ: ಚುನಾವಣೆ ಸಮೀಪಿಸುತ್ತಿ ದ್ದಂತೆ ಎಲ್ಲೆಡೆ ರಾಜಕೀಯ ಚಟುವಟಿಕೆಗಳೂ ಬಿರುಸು ಪಡೆದಿವೆ. ಸದ್ಯಕ್ಕಂತೂ ಅಭ್ಯರ್ಥಿಗಳ ಪ್ರಚಾರದ್ದೇ ಹಾವಳಿ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೊಂದು ಹೊಸ ಖಾತೆಗಳು ತೆರೆದು ಹತ್ತಾರು ಪೋಸ್ಟರ್‌ಗಳನ್ನು ಹಾಕಲಾಗುತ್ತಿದೆ. ಅದರಲ್ಲೂ ಡಬ್ಬಿಂಗ್‌ ಹಾಡುಗಳ ಹಾವಳಿ ಕೂಡ ಹೆಚ್ಚಾಗುತ್ತಿದೆ. ಕೆಲವೊಂದು ಸಿನಿಮಾ ಹಾಡುಗಳನ್ನೇ ತಮ್ಮ ನಾಯಕನ ಬಣ್ಣನೆಗೆ ಬಳಸಿಕೊಳ್ಳುತ್ತಿದ್ದು, ಇಂದ್ರ ಚಂದ್ರ ಎಂದೆಲ್ಲ ಹಾಡಿ ಹೊಗಳುವುದು, ಅವರಿಲ್ಲದೇ ಹೋದರೆ ಕ್ಷೇತ್ರದ ಜನ ಅನಾಥರಾಗುತ್ತಾರೆ ಎಂಬಂಥ ಸೆಂಟಿಮೆಂಟ್‌ ಡೈಲಾಗ್‌ಗಳನ್ನು ಅಳವಡಿಸಿ ಜನರ ಮನ ಪರಿವರ್ತನೆಗೆ ಯತ್ನಿಸಲಾಗುತ್ತಿದೆ.

ಇನ್ನು ವಾಟ್ಸ್‌ಆ್ಯಪ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಸೇರಿದಂತೆ ವಿವಿಧ ಪೇಜ್‌ಗಳಲ್ಲಿ, ಸ್ಟೇಟಸ್‌ ಹಾಕಿ ಪ್ರಚಾರ ನಡೆಸಲಾಗುತ್ತಿದೆ. ಇನ್ನೂ ಕೆಲ ಅಭ್ಯರ್ಥಿಗಳು ಮತದಾರರಿಗೆ ಕರೆ ಮಾಡಿಸಿ ಬೆಂಬಲ ಯಾಚಿಸುತ್ತಿದ್ದಾರೆ. ಕೆಲ ಯುವಕ- ಯುವತಿಯರನ್ನು ಇದೇ ಕೆಲಸಕ್ಕೆ ನಿಯೋಜಿಸಿದ್ದು, ನಿತ್ಯ ಕರೆ ಮಾಡುವುದೇ ಅವರ ಕಾಯಕವಾಗಿದೆ.

– ಸಿದ್ಧಯ್ಯಸ್ವಾಮಿ ಕುಕನೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next