Advertisement

ಹಂಗಳೂರು: ನಿವೇಶನ ರಹಿತರಿಗೆ ಭೂಮಿ ಹಕ್ಕು ಪತ್ರಕ್ಕಾಗಿ ಧರಣಿ

06:19 PM Mar 06, 2017 | Team Udayavani |

ಕುಂದಾಪುರ: ಪ್ರತಿ 26 ನಿಮಿಷಕ್ಕೊಬ್ಬ ರೈತ ಆತ್ಮಹತ್ಯೆಗೆ ಕಾರಣವಾಗಿರುವ ಇಂದಿನ ಕೃಷಿ ಬಿಕ್ಕಟ್ಟಿಗೆ ಕಳೆದ 25 ವರ್ಷಗಳ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕೃಷಿ ನೀತಿಗಳೇ ಕಾರಣ. ರೈತ ಕೃಷಿಕೂಲಿಕಾರರನ್ನು ಹಳ್ಳಿ ಮತ್ತು ಕೃಷಿಯಿಂದ ಆಚೆ ದೂಡಿ, ಕೃಷಿಯನ್ನು ದೇಶಿ – ವಿದೇಶಿ ಕಂಪೆನಿಗಳಿಗೆ ವಹಿಸಿಕೊಡುವ ಉದ್ದೇಶ ಹೊಂದಿದೆ. 1990ರ ದಶಕದಿಂದ ಹಂತ ಹಂತವಾಗಿ ರೈತ ಆಧಾರಿತ ಕೃಷಿಯ ಉತ್ಪಾದನಾ ವೆಚ್ಚವನ್ನು ಗಂಭೀರವಾಗಿ ಹೆಚ್ಚಿಸಿದೆ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಕಾರ್ಯದರ್ಶಿ ವೆಂಕಟೇಶ ಕೋಣಿ ಹೇಳಿದರು.

Advertisement

ಕೃಷಿ ಆಧಾರಿತ ಸಂಘದ ಹಂಗಳೂರು ಗ್ರಾಮ ಸಮಿತಿ ನೇತೃತ್ವದಲ್ಲಿ ಹಂಗಳೂರು ಗ್ರಾ.ಪಂ. ಕಚೇರಿ ವಠಾರದಲ್ಲಿ ಮನೆ ನಿವೇಶನ ರಹಿತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಸಮಿತಿ ಅಧ್ಯಕ್ಷ ಯು. ದಾಸ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು.  ಕೃಷಿಕೂಲಿಕಾರರ ಸಂಘದ  ಮುಖಂಡರಾದ ರಾಜೀವ ಪಡುಕೋಣೆ, ಪದ್ಮಾವತಿ ಶೆಟ್ಟಿ, ಕುಶಲ, ನಾಗರತ್ನಾ, ವಿಲ್ಸನ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next