Advertisement

ಧಮ್ ಇದ್ದಲ್ಲಿ ಸಿಬಿಐಗೆ ವಹಿಸಿ : ದೊಡ್ಡನಗೌಡ ಪಾಟೀಲರಿಗೆ ಬಯ್ಯಾಪೂರ ಸವಾಲು

10:28 PM Dec 16, 2022 | Team Udayavani |

ಕುಷ್ಟಗಿ: ಬಿಜೆಪಿಯವರಿಗೆ ಕುಷ್ಟಗಿ ಕ್ಷೇತ್ರಕ್ಕೆ ಬಿಡುಗಡೆಯಾದ 1,300 ಕೋಟಿ ರೂ. ಅನುದಾನದ ಕೆಲಸ ನಿರ್ವಹಿಸಿದ ಬಗ್ಗೆ ಅನುಮಾನದ ಆಪಾದನೆ ಇದೆ. ತಾಕತ್ ಇದ್ದಲ್ಲಿ, ಧಮ್ ಇದ್ದಲ್ಲಿ ಸಿಬಿಐಗೆ ವಹಿಸಿ ನೋಡೋಣ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಸ್ಥಳೀಯ ಬಿಜೆಪಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅವರಿಗೆ ಬಹಿರಂಗ ಸವಾಲು ಹಾಕಿದರು.

Advertisement

ಇಲ್ಲಿನ ಟಿಎಪಿಸಿಎಂಎಸ್ ಮೈದಾನದಲ್ಲಿ ನಡೆದ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಅವರ 69ನೇ ಜನ್ಮ ದಿನೋತ್ಸವ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಬಿಜೆಪಿಯವರು 1,300 ಕೋಟಿ ರೂ. ಬಿಡುಗಡೆಯಾದ ಅನುದಾನ ಒಪ್ಪಿಕೊಂಡಿದ್ದಾರೆ. ಈ ಅನುದಾನದಲ್ಲಿ ತಾವರಗೇರ ಕುಡಿಯುವ ನೀರು 100 ಕೋಟಿ ರೂ., ಕೆರೆ ತುಂಬಿಸುವ ಯೋಜನೆಗೆ 500 ಕೋಟಿ ರೂ., ಚಕ್ ಡ್ಯಾಂ 100 ಕೋಟಿ ರೂ., ಕುಷ್ಟಗಿ ಪಟ್ಟಣಕ್ಕೆ ಕುಡಿಯುವ ನೀರು, ರಸ್ತೆಗಳು, ಶಾಲಾ ಕಾಲೇಜು ಈ ರೀತಿಯ ಆನೇಕ ಕಟ್ಟಡಗಳನ್ನು ನಿರ್ಮಿಸಿ ಶೈಕ್ಷಣಿಕವಾಗಿ ಮುಂದೆ ಬರಲು ಇಚ್ಛಾಶಕ್ತಿಯಿಂದ ನಿರ್ವಹಿಸಿದ್ದೇವೆ. ನಿಮ್ಮೆಲ್ಲರ ಆಶೀರ್ವಾದದಿಂದ ಈ ಕ್ಷೇತ್ರದಲ್ಲಿ ಮತ್ತೊಮ್ಮೆ ವಿಜಯ ಪತಾಕೆ ಹಾರಿಸುತ್ತೇವೆ ಇದರಲ್ಲಿ ಯಾವೂದೇ ಅನುಮಾನ ಇಲ್ಲ. ನಿಮ್ಮೆಲ್ಲರ ಆಶೀರ್ವಾದ ಇರುವವರೆಗೂ ಕ್ಷೇತ್ರಕ್ಕೆ ಸುಭಿಕ್ಷೆ ತರುವ ಕೆಲಸ ನಿರ್ವಹಿಸುವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next