Advertisement

ಹಂಪಿ ಉತ್ಸವ ಪ್ರಸ್ತಾವನೆ ತಿರಸ್ಕಾರ?

06:19 AM Jan 15, 2019 | Harsha Rao |

ಬಳ್ಳಾರಿ: ವಿಶ್ವ ವಿಖ್ಯಾತ ಹಂಪಿ ಉತ್ಸವ ಆಚರಿಸುವುದಾಗಿ ರಾಜ್ಯ ಸರ್ಕಾರ ಜಿಲ್ಲಾಡಳಿತದಿಂದ ತರಿಸಿಕೊಂಡಿದ್ದ ವರದಿ ತಿರಸ್ಕರಿಸಿದೆ ಎಂದು ತಿಳಿದು ಬಂದಿದೆ.

Advertisement

ಕಳೆದ ನವೆಂಬರ್‌ನಲ್ಲಿ ಆಚರಿಸಬೇಕಿದ್ದ ಹಂಪಿ ಉತ್ಸವವನ್ನು ಚುನಾವಣೆ ನೆಪದಲ್ಲಿ ಮುಂದೂಡಿ ನಂತರ ಬರದ ನೆಪವೊಡ್ಡಿ ರದ್ದುಗೊಳಿಸಲು ಸರ್ಕಾರ ಸಜ್ಜಾಗಿತ್ತು. ಪರಿಣಾಮ ಜಿಲ್ಲೆಯಲ್ಲಿ ಕಲಾವಿ ದರು, ಕನ್ನಡ ಪರ ಸಂಘಟನೆಗಳು ರಸ್ತೆಗಿಳಿದು ಪ್ರತಿಭಟಿಸಿ ಒತ್ತಡ ಹೆಚ್ಚಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೊನೆಗೆ ಉತ್ಸವವನ್ನು ಆಚರಿಸುವುದಾಗಿ ಘೋಷಿಸಿ, ಉತ್ಸವ ಆಚರಣೆಗೆ ಬೇಕಾಗುವ ಖರ್ಚು- ವೆಚ್ಚದ ವರದಿ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿತ್ತು.

ರಾಜ್ಯ ಸರ್ಕಾರದ ಸೂಚನೆಯಂತೆಯೇ 2 ದಿನ ಸರಳವಾಗಿ ಆಚರಿಸಲು 8 ಕೋಟಿ ರೂ. ವರದಿಯನ್ನು ಜಿಲ್ಲಾಡಳಿತ ಸಿದ್ಧಪಡಿಸಿತ್ತು. 4 ವೇದಿಕೆಗಳ ನಿರ್ಮಾಣ ಸೇರಿ ಹಂಪಿ ಉತ್ಸವದಲ್ಲಿ ಜನಮನ್ನಣೆಗಳಿಸಿದ್ದ ಧ್ವನಿ ಮತ್ತು ಬೆಳಕು ಕಾರ್ಯಕ್ರಮವನ್ನೂ ಆಯೋಜಿಸುವುದಾಗಿ ವರದಿಯಲ್ಲಿ ತಿಳಿಸಿದ್ದು, ಅದಕ್ಕಾಗಿ 8 ಕೋಟಿ ರೂ. ಕ್ರಿಯಾಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ನಂತರ ರಾಜ್ಯ ಸರ್ಕಾರ, ಹಂಪಿ ಉತ್ಸವ ಆಚರಣೆಗೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ 60 ಲಕ್ಷ ರೂ, ಪ್ರವಾಸೋದ್ಯಮ ಇಲಾಖೆಗೆ 1.50 ಲಕ್ಷ ರೂ. ಸೇರಿ ಒಟ್ಟು 2.10 ಲಕ್ಷ ರೂ. ಅನುದಾನ ಬಿಡುಗಡೆಗೊಳಿಸಿತ್ತು. ಜಿಲ್ಲಾಡಳಿತ ಸಲ್ಲಿಸಿರುವ 8 ಕೋಟಿ ರೂ. ಅನುದಾನ ನೀಡಲು ನಿರಾಕರಿಸಿರುವ ಸರಕಾರ ಸ್ಥಳೀಯ ಸಂಸ್ಥೆಗಳಿಂದ ಹಣ ಕ್ರೋಢೀಕರಿಸಿ ಹಂಪಿ ಉತ್ಸವ ಆಚರಿಸುವಂತೆ ಸೂಚಿಸಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next