Advertisement

Shimoga; ರಾಮಮಂದಿರಕ್ಕೆ ಕರಿ ಕಂಬಳಿ ಕಳುಹಿಸಲು ಮುಂದಾದ ಹಾಲುಮತಸ್ಥರು

02:56 PM Jan 16, 2024 | keerthan |

ಶಿವಮೊಗ್ಗ: ಅಯೋಧ್ಯೆಯಲ್ಲಿ ಶ್ರೀರಾಮ‌ ಮಂದಿರದಲ್ಲಿ ರಾಮ ದೇವರ ಪ್ರಾಣಪ್ರತಿಷ್ಠೆ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಚಳ್ಳಕೆರೆ ಗ್ರಾಮಸ್ಥರು ಅಯೋಧ್ಯೆಗೆ ಕರಿ ಕಂಬಳಿ ಕಳಿಸಲು ಮುಂದಾಗಿದ್ದಾರೆ.

Advertisement

ಮಾಜಿ ಡಿಸಿಎಂ ಈಶ್ವರಪ್ಪನವರ ಮೂಲಕ ಅಯೋಧ್ಯೆಗೆ ಕರಿ ಕಂಬಳಿ ಕಳುಹಿಸಲು ಹಾಲುಮತಸ್ಥರು ಮುಂದಾಗಿದ್ದಾರೆ. ಚಳ್ಳಕೆರೆ ತಾಲೂಕಿನ ಬಗಡಲಬಂಡೆ ಗ್ರಾಮಸ್ಥರು ಶ್ರೀರಾಮನಿಗೆ ಕೈಯಿಂದ ನೇಯ್ದಿರುವ ಕರಿ ಕಂಬಳಿ ನೀಡುತ್ತಿದ್ದಾರೆ.

ನಲವತ್ತು ಮನೆಗಳಿಂದ ಕುರಿ ಉಣ್ಣೆ ಸಂಗ್ರಹಿಸಿ ತಯಾರಿಸಿರುವ ಕರಿ ಕಂಬಳಿಯನ್ನು ರಾಮ ಮಂದಿರದ ಗದ್ದುಗೆ ಮೇಲೆ ಇಡಲು ಕಳಿಸಿಕೊಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next