Advertisement

ಸಾಹಿತಿ ಡಾ|ಜೀವಿ ಕುಲಕರ್ಣಿ ಅವರಿಗೆ ಹಲಸಂಗಿ ಗೆಳೆಯರ ಪ್ರತಿಷ್ಠಾನದ ಪ್ರಶಸ್ತಿ

12:37 PM Apr 04, 2019 | Vishnu Das |

ಮುಂಬಯಿ: ನಗರದ ಹಿರಿಯ ಸಾಹಿತಿ ಡಾ| ಜಿ. ವಿ. ಕುಲಕರ್ಣಿ ಅವರ ಕನ್ನಡ ಕಾವ್ಯ ಕ್ಷೇತ್ರದಲ್ಲಿನ ವಿಶೇಷ ಸಾಧನೆಯನ್ನು ಗುರುತಿಸಿ ಹಲಸಂಗಿ ಗೆಳೆಯರ ಪ್ರತಿಷ್ಠಾನದ ವತಿಯಿಂದ ಸಂಸ್ಥೆಯ ವಾರ್ಷಿಕ ಪ್ರಶಸ್ತಿಯನ್ನು ಪ್ರಧಾನಿಸಿ ಗೌರವಿಸಲಾಯಿತು. ಹಲಸಂಗಿ ಗೆಳೆಯರ ಪ್ರತಿಷ್ಠಾನದವರು ಮಾ. 31ರಂದು ವಿಜಯಪುರದಲ್ಲಿ ಕಂದಗಲ್‌ ಹನುಮಂತರಾಯ ಸಭಾಗೃಹದಲ್ಲಿ ಆಯೋಜಿಸಿದ‌ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ| ಜಿ. ವಿ. ಕುಲಕರ್ಣಿ ಅವರನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯೊಂದಿಗೆ 51 ಸಾವಿರ ರೂ. ಗಳ ಹಮ್ಮಿಣಿಯೊಂದಿಗೆ ಸಮ್ಮಾನಿಸಿ ಶುಭ ಹಾರೈಸಿದರು.

Advertisement

ಈ ಸಂದರ್ಭದಲ್ಲಿ ಡಾ| ಬಿರಾದಾರ, ನಿವೃತ್ತ ಐಎಎಸ್‌ ಅಧಿಕಾರಿ ಡಾ| ಶಿವಾನಂದ ಜಾಮದಾರ, ಸಾಹಿತಿಗಳಾದ ಡಾ| ಕೊಪ್ಪ, ಡಾ| ಗುರುಲಿಂಗ ಕಾಪಸೆ ಅವರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಸಂಶೋಧಕರಾದ ಡಾ| ವೀರಣ್ಣ ರಾಜೂರ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು.
ಜೀವಿ ಎಂಬ ಕಾವ್ಯನಾಮದಿಂದ ಕನ್ನಡ ರಸಿಕರಿಗೆ ಚಿರಪರಿಚಿತರಾಗಿರುವ ಡಾ| ಜಿ. ವಿ. ಕುಲಕರ್ಣಿ ವಿಜಾಪುರ ಜಿಲ್ಲೆಯ ಡೊಮನಾಳದಲ್ಲಿ ಹುಟ್ಟಿ ಪ್ರಾಥಮಿಕ ಶಿಕ್ಷಣವನ್ನು ಗದಗ, ಕಾಲೇಜು ಶಿಕ್ಷಣವನ್ನು ಧಾರವಾಡದಲ್ಲಿ ಮುಗಿಸಿದರು. ಅನಂತರ ಮುಂಬಯಿಗೆ ಬಂದು ಶಿಕ್ಷಕ ವೃತ್ತಿಯಲ್ಲಿ ತೊಡಗಿದರು. ಕನ್ನಡ ಇನ್ನಿತರ ಪತ್ರಿಕೆಗಳೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದ ಅವರಿಗೆ ವರಕವಿ ಬೇಂದ್ರೆ ಅವರ ಅಂತೇವಾಸಿಯಾಗುವ ಸುಯೋಗ ದೊರಕಿತು. ಸಾಹಿತ್ಯದ ಈ ದಿಗ್ಗಜಗಳ ಒಡನಾಟದ ಫಲವಾಗಿ ಮೂಡಿ ಬಂದ ಅಪರೂಪದ ಕೃತಿ “ನಾ ಕಂಡ ಬೇಂದ್ರೆ’ ಹಾಗೂ “ನಾ ಕಂಡ ಗೋಕಾಕ’. ಈ ಎರಡು ಗ್ರಂಥಗಳು ಅವರಿಗೆ ಮನ್ನಣೆಯನ್ನು ದೊರಕಿಸಿಕೊಟ್ಟಿವೆೆ. ಜೀವಿಯವರು ಸ್ವಭಾವತಃ ಕವಿಗಳು. ಬೇಂದ್ರೆ ಅವರ ಸಂಪರ್ಕದಿಂದಾಗಿ ಅವರ ಕಾವ್ಯಕ್ಕೆ ಹೊಸ ಆಯಾಮ ದೊರೆಯಿತು. ಇನ್ನೂ ವಿದ್ಯಾರ್ಥಿಯಾಗಿರುವಾಗಲೇ ಅವರ “ಮಧುಸಂಚಯ’ ಪ್ರಥಮ ಕವನ ಸಂಕಲನವು ಪ್ರಕಟಗೊಂಡಿತು. ಇಲ್ಲಿನ ಹೆಚ್ಚಿನ ಕವನಗಳು ನಗರದ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಜೀವಿಯವರು ಟೈಮ್ಸ್‌ ಆಫ್‌ ಇಂಡಿಯಾದಲ್ಲಿ ದೀರ್ಘ‌ ವಿಮಶಾì ಲೇಖನಗಳನ್ನು ಬರೆದಿದ್ದಾರೆ.

ಜೀವಿಯವರು ಅನೇಕ ಕತೆಗಳು, ಲಲಿತ ಪ್ರಬಂಧಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಅವರು ಬರೆದ ಏಕಾಂಕ ನಾಟಕಗಳು ಅಂತರ್‌ಕಾಲೇಜು ಸ್ಪರ್ಧೆಗಳಲ್ಲಿ ಬಹುಮಾನ ಗಳನ್ನು ಬಾಚಿಕೊಂಡಿವೆ. ಕನ್ನಡ ಸಾಹಿತ್ಯ ಸಮ್ಮೇಳನ, ಅಂತರ್‌ ಭಾಷಾ ಕವಿ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ. ಅವರ ಅಸಂಖ್ಯಾತ ವಿಮಶಾì ಲೇಖನಗಳು ಪ್ರಕಟಗೊಂಡಿವೆ. 2006ರಲ್ಲಿ ಅಮೆರಿಕಾದಲ್ಲಿ ಹ್ಯೂಸ್ಟನ್‌ನಲ್ಲಿ ನಡೆದ ವಿಶ್ವಸಹಸ್ರಮಾನ ಕನ್ನಡ ಸಮ್ಮೇಳನದ ಆಮಂತ್ರಣ ಪಡೆದು ಅಲ್ಲಿ ಕಾವ್ಯವಾಚನ ಮಾಡಿದ್ದಾರೆ. ನಾಲ್ಕು ತಿಂಗಳು ಅಮೆರಿಕಾದಲ್ಲಿ ನೆಲೆಸಿ ಅಲ್ಲಿ ಹಲವಾರು ಕನ್ನಡಪರ ಕಾರ್ಯಕ್ರಮಗಳಲ್ಲಿ ಕಾವ್ಯವಾಚನ ಮಾಡಿದ ಹೆಮ್ಮೆ ಅವರಿಗಿದೆ. ಕನ್ನಡ ನಾಡಿನ ಸಾಂಸ್ಕೃತಿಕ ರಾಯಭಾರಿಯಂತೆ ಐದು ದಶಕ
ಗಳಿಂದ ಮುಂಬಯಿಯಲ್ಲಿ ಕನ್ನಡ ನಾಡು-ನುಡಿಯ ಸೇವೆ ಯನ್ನು ಮಾಡುತ್ತಿದ್ದಾರೆ. ಅವರಿಗೆ ಹೊರನಾಡ ಕನ್ನಡಿಗರಲ್ಲಿ ಅನನ್ಯ ಸ್ಥಾನವಿದೆ. ಪ್ರಸ್ತುತ ಅವರ ಸಾಧನೆಗೆ ಮತ್ತೂಂದು ಪ್ರಶಸ್ತಿಯ ಗರಿ ಲಭಿಸಿರುವುದು ಹೆಮ್ಮೆಯ ವಿಷಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next