Advertisement

ಹಲಾಲ್‌ ಕಟ್‌ ವಿವಾದ: ಸಿ.ಟಿ. ರವಿ ಸರಕಾರದ ಭಾಗವಲ್ಲ: ಸಚಿವ ನಾಗೇಶ್‌

09:21 PM Apr 06, 2022 | Team Udayavani |

ಬೆಂಗಳೂರು: ಹಲಾಲ್‌ ಕಟ್‌ ಮಾಂಸವನ್ನು ಖರೀದಿ ಮಾಡಬಾರದೆಂದು ಸರಕಾರ ಅಥವಾ ಯಾವುದೇ ಸಚಿವರು ಹೇಳಿಕೆ ನೀಡಿಲ್ಲ. ಸಿ.ಟಿ. ರವಿ ಸರಕಾರದ ಭಾಗವಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ತಿಳಿಸಿದರು.

Advertisement

ಹಲಾಲ್‌ ಮಾಂಸ ಖರೀದಿ ಮಾಡದಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರಲ್ಲಾ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಸಿ.ಟಿ. ರವಿ ಅವರು ದೇಶದ ಪ್ರಜೆಯಾಗಿ ಹೇಳಿಕೆ ನೀಡಿದ್ದಾರೆ. ಮಾಂಸ ತಿನ್ನುವುದು ಮತ್ತು ಖರೀದಿ ಮಾಡುವುದು ಜನರ ವೈಯಕ್ತಿಕ ವಿಚಾರ ಎಂದರು.

ಇದನ್ನೂ ಓದಿ:ಜಗನ್‌ ಸಂಪುಟದ ಎಲ್ಲಾ ಸಚಿವರು ನಾಳೆ ರಾಜೀನಾಮೆ; ಎ.11ಕ್ಕೆ ಸಂಪುಟ ಪುನರ್‌ರಚನೆ

ಮಾವು ಖರೀದಿ ಮಾಡುವುದು ಮತ್ತು ಮಾರಾಟ ಮಾಡುವುದು ಕೂಡ ವ್ಯಾಪಾರಿಗಳು ಹಾಗೂ ಮಾಲಕರ ವೈಯಕ್ತಿಕ ವಿಚಾರ. ಎಲ್ಲ ಕಂಪೆನಿಗಳು ತಮ್ಮ ಸಂಸ್ಥೆಯ ವಸ್ತುಗಳನ್ನು ಖರೀದಿ ಮಾಡುವಂತೆ ಪ್ರಚಾರ ಮಾಡುತ್ತವೆ. ಮಾರುಕಟ್ಟೆಗಳಲ್ಲಿ ವ್ಯಾಪಾರಿಗಳ ಬುದ್ಧಿ ಕೆಲಸ ಮಾಡುತ್ತದೆ. ಅಂತಿಮವಾಗಿ ಕೊಳ್ಳುವುದು, ಬಿಡುವುದು ಜನರ ವಿವೇಚನೆಗೆ ಬಿಟ್ಟ ವಿಚಾರ ಎಂದು ಪ್ರತಿಕ್ರಿಯಿಸಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next