Advertisement

Haikady: ಚಿನ್ನ ತೊಳೆದುಕೊಡುವ ನೆಪದಲ್ಲಿ ಕರಿಮಣಿ ಸರ ಕದ್ದು ಪರಾರಿ

10:14 PM Oct 14, 2023 | Team Udayavani |

ಸಿದ್ದಾಪುರ:ಚಿನ್ನ ತೊಳೆದುಕೊಡುತ್ತೇವೆ ಎಂದು ನಂಬಿಸಿ ಸುಮಾರು 30 ಗ್ರಾಂ ತೂಕದ 1,50,000 ರೂ. ಮೌಲ್ಯದ ಚಿನ್ನದ ಕರಿಮಣಿ ಸರವನ್ನು ಲೂಟಿ ಮಾಡಿದ ಘಟನೆ ಶನಿವಾರ ಹಿಲಿಯಾಣ ಗ್ರಾಮದ ಹೈಕಾಡಿ ನಾಯ್ಕಹಟ್ಟಿ ಮನೆ ಎಂಬಲ್ಲಿ ನಡೆದಿದೆ.

Advertisement

ಹಿಲಿಯಾಣ ಗ್ರಾಮದ ಹೈಕಾಡಿ ನಾಯ್ಕಹಟ್ಟಿ ಮನೆ ಪಾರ್ವತಿ (65) ಅವರ ಮನೆಗೆ ಆಗಂತುಕರಿಬ್ಬರು ಬ್ಯಾಗ್‌ಗಳನ್ನು ಹಿಡಿದುಕೊಂಡು ಬಂದು ಚಿನ್ನ ತೊಳೆದುಕೊಡುತ್ತೇವೆ ಎಂದು ಹೇಳಿದರು. ಅದಕ್ಕೆ ಸ್ಪಂದಿಸಿದ ಪಾರ್ವತಿ ತನ್ನ ಕರಿಮಣಿಯನ್ನು ನೀಡಿದರು. ಸ್ವಲ್ಪ ಹೊತ್ತಿನಲ್ಲಿ ಆಗಂತುಕರು ಕುಡಿಯಲು ನೀರು ಕೇಳಿದರು. ಪಾರ್ವತಿ ನೀರು ತರಲು ಒಳಗೆ ಹೋಗುತ್ತಿದ್ದಂತೆ ಆಗಂತುಕರು ಕರಿಮಣಿ ಸಹಿತ ಪರಾರಿಯಾಗಿದ್ದಾರೆ.

ಪಾರ್ವತಿ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next