Advertisement

ಶಾಸಕ ಮೇಟಿ ರಾಸಲೀಲೆ: 8 ತಿಂಗಳ ಬಳಿಕ ಸಂತ್ರಸ್ತೆ ಹಾಜರ್‌

03:45 AM Jul 18, 2017 | Team Udayavani |

ಬಾಗಲಕೋಟೆ: ಮಾಜಿ ಸಚಿವ, ಶಾಸಕ ಎಚ್‌.ವೈ. ಮೇಟಿ ರಾಸಲೀಲೆ ಪ್ರಕರಣಕ್ಕೆ ಕ್ಲೀನ್‌ ಚಿಟ್‌ ಸಿಕ್ಕಿದ್ದು, ವಿವಾದವಾಗಿ ಎಂಟು ತಿಂಗಳ ಬಳಿಕ ಪ್ರಕರಣದಲ್ಲಿ ಪ್ರಮುಖವಾಗಿ ಹೆಸರು ಕೇಳಿಬಂದಿದ್ದ ಸಂತ್ರಸ್ತ ಮಹಿಳೆ, ಸೋಮವಾರ ಕರ್ತವ್ಯಕ್ಕೆ ಹಾಜರಾಗಲೆಂದು ಆಯುಷ್‌ ಆಸ್ಪತ್ರೆಯಲ್ಲಿ ಹಾಜರಾಗಿದ್ದಾರೆ. ಎಂಟು ತಿಂಗಳ ಹಿಂದೆ ಅಬಕಾರಿ ಸಚಿವರಾಗಿದ್ದ ಮೇಟಿ ಅವರೊಂದಿಗೆ ಮಹಿಳೆ ರಾಸಲೀಲೆಯಲ್ಲಿ ತೊಡಗಿದ್ದಾರೆಂದು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗಿತ್ತು. ಈ ವಿವಾದದಿಂದ ಮೇಟಿ ಅವರು ತಮ್ಮ ಸಚಿವ ಸ್ಥಾನವನ್ನು ತೊರೆದಿದ್ದರು. ಅಂದಿನಿಂದ ಇಲ್ಲಿಯವರೆಗೆ ಮಹಿಳೆ ಎಲ್ಲಿದ್ದಾರೆ ಎಂಬುದು ಯಾರಿಗೂ ತಿಳಿದಿರಲಿಲ್ಲ. ಈ ಕುರಿತು ಸಿಐಡಿ ಅಧಿಕಾರಿಗಳು ತನಿಖೆ ನಡೆಸಿ, ಸರಕಾರಕ್ಕೆ ವರದಿ ಸಲ್ಲಿಸಿದ್ದರು. ರಾಜಕೀಯವಾಗಿ ಮೇಟಿ ಅವರ ಹೆಸರು ಕೆಡಿಸಲು ಕೆಲವರು ಮಾಡಿದ ಕುತಂತ್ರ ಎಂದು ಸಿಐಡಿ ಕ್ಲೀನ್‌ಚಿಟ್‌ ನೀಡಿತ್ತು.

Advertisement

ಎಂಟು ತಿಂಗಳಿಂದ ರಜೆ ಪಡೆಯದೆ ಅನಧಿಕೃತವಾಗಿ ಗೈರು ಹಾಜರಾಗಿದ್ದು, ನೀವು ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆದುಕೊಂಡು ಬಂದರೆ ಮಾತ್ರ, ಮೊದಲಿನ ಹುದ್ದೆಗೆ ಹಾಜರಾಗಲು ಅವಕಾಶ ಕೊಡಲಾಗುವುದು ಎಂದು ಡಾ| ಮಹೇಶ ಗುಗ್ಗರಿ ಮಹಿಳೆಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next