Advertisement

ಯಾರ ಬಗ್ಗೆ ಭಯ ಇರುತ್ತೋ ಅವರೇ ಟಾರ್ಗೆಟ್ : ಸಿದ್ದರಾಮಯ್ಯ

05:43 PM Apr 24, 2022 | Team Udayavani |

ಕೊಪ್ಪಳ: ಯಾರ ಬಗ್ಗೆ ಭಯ ಇರತ್ತೋ ಅವರನ್ನೆ ಟಾರ್ಗೆಟ್ ಮಾಡುತ್ತಾರೆ ಅಲ್ವಾ ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ.

Advertisement

ಕುಷ್ಟಗಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಕುಮಾರಸ್ವಾಮಿಗೂ ನನ್ನ ಬಗ್ಗೆ ಬಗ್ಗೆ ಭಯ ಇದೆ ಹಾಗಾಗಿ ನನ್ನ ಟಾರ್ಗೆಟ್ ಮಾಡ್ತಿದ್ದಾರೆ. ನನ್ನ ಯಾಕೆ ಟಾರ್ಗೆಟ್ ಮಾಡಲಾಗುತ್ತಿದೆ ಎನ್ನುವುದನ್ನು ಅವರನ್ನೇ ಕೇಳಿ ಎಂದರು.

ನಾನು ಕೊಪ್ಪಳ ಜಿಲ್ಲೆಯಿಂದ ಸ್ಪರ್ಧೆ ಮಾಡುವುದಿಲ್ಲ. ಸ್ಥಳಿಯ ಮುಖಂಡರು ಅಭಿಮಾನಕ್ಕಾಗಿ ಅವರು ಹೇಳುತ್ತಿದ್ದಾರೆ. ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವಂತೆ ಒತ್ತಡ ಹಾಕುತ್ತಿದ್ದಾರೆ‌. ಬಹುತೇಕ ಕಡೆ ನನಗೆ ಸ್ಪರ್ಧೆ ಮಾಡುವಂತೆ ಒತ್ತಾಯ ಇದೆ. ಆದರೆ ಇನ್ನು ಚುನಾವಣೆ ದೂರ ಇದೆ ಆಗ ನೋಡೋಣ ಎಂದರು.

ಪಿಎಸೈ ನೇಮಕಾತಿಯಲ್ಲಿ ಅಕ್ರಮ ನಡೆದ ವಿಚಾರ, ಅಕ್ರಮ ನಿಲ್ಲಬೇಕು. ಅರ್ಹರಿಗೆ ಅವಕಾಶ ಸಿಗಬೇಕು. ಯಾರು ತಪ್ಪು ‌ಮಾಡುತ್ತಾರೋ ಅವರಿಗೆ ಕಠಿಣ ಶಿಕ್ಷೆ ಆಗಲಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next