Advertisement

ಮಾಸ್ಕ್ ಧರಿಸದ ಅಂಗಡಿ ಮಾಲೀಕರಿಗೆ ದಂಡ

04:04 PM Jun 21, 2020 | Naveen |

ಗುರುಮಠಕಲ್‌: ಅಂಗಡಿ ಮುಂಗಟ್ಟು ಭಾಗಗಳಲ್ಲಿ ಯಾರಾದರೂ ತಂಬಾಕು, ಗುಟ್ಕಾ ಉಗುಳಿದರೆ, ಸಿಗರೇಟ್‌ ಸೇದುತ್ತಿರುವುದು ಕಂಡು ಬಂದಲ್ಲಿ ಅಂಗಡಿ ಮಾಲೀಕರಿಗೆ ದಂಡ ವಿಧಿಸಲಾಗುವುದು ಎಂದು ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ವೆಂಕಟೇಶ ಎಚ್ಚರಿಕೆ ನೀಡಿದ್ದಾರೆ.

Advertisement

ಪಟ್ಟಣದಲ್ಲಿ ಜಂಟಿಯಾಗಿ ಕ್ಷೀಪ್ರ ಸಂಚಾರಿ ದಳ ವತಿಯಿಂದ ಅಂಗಡಿ ಪರಿಶೀಲಿಸಿದ ಅವರು, ಕೋವಿಡ್ ರೋಗ ನಮ್ಮ ಕ್ಷೇತ್ರದಲ್ಲಿ ಹೆಚ್ಚು ಪ್ರಸರಣವಾಗುತ್ತಿದೆ. ಕೊವೀಡ್‌ -19 ತಡೆಯಲು ಜನರು ನಿಮ್ಮ ಅಂಗಡಿಗಳಿಗೆ ವ್ಯಾಪರ ಮಾಡಲು ಬಂದಾಗ ಮಾಸ್ಕ್ ಧರಿಸಿಕೊಳ್ಳುವಂತೆ ಹಾಗೂ ಸಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಿಳಿಸಬೇಕು ಎಂದು ಸೂಚಿಸಿದರು.

ಉಪ ತಹಶೀಲ್ದಾರ್‌ ಮಹಮ್ಮದ್‌ ಇಜಾಜ್‌ ಉಲ್‌ಹಕ್‌, ಸ್ಯಾನಿಟರಿ ಇನಸ್ಪೆಕ್ಟರ್‌ ರಾಮುಲು ಗೌಡ, ಗುರಮಠಕಲ್‌ ಠಾಣೆ ಹೆಡ್‌ ಕಾನ್ಸಸ್ಟೇಬಲ್‌ ಚಂದ್ರಕಾಂತ ಹಾಗೂ ಪುರಸಭೆ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next