Advertisement

ಇಂಧನ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್‌ ಪ್ರತಿಭಟನೆ

12:02 PM Jul 09, 2020 | Naveen |

ಗುರುಮಠಕಲ್‌: ತೈಲ ಬೆಲೆ ಏರಿಕೆ ವಿರೋಧಿಸಿ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ಮಿಠ್ಠಿ ಬಾವಿಯಿಂದ ಸೈಕಲ್‌ ರ‌್ಯಾಲಿ ಮೂಲಕ ಆಗಮಿಸಿ ಉಪ ತಹಶೀಲ್ದಾರ್‌ ಮಹಮ್ಮದ್‌ ಇಜಾಜ್‌ ಉಲ್‌ ಹಕ್‌ ಅವರಿಗೆ ಮನವಿ ಸಲ್ಲಿಸಲಾಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹಿಪಾಲರೆಡ್ಡಿ ಹತ್ತಿಕುಣಿ, ಪೆಟ್ರೋಲ್‌, ಡೀಸೆಲ್‌ ಹಾಗೂ ಎಲ್‌ಪಿಜಿ ದರ ಏರಿಕೆಯಿಂದಾಗಿ ಸಾಮಾನ್ಯರ ಬದುಕು ದುಸ್ತರವಾಗುತ್ತಿದೆ. ಈ ಕೂಡಲೇ ತೈಲ ಬೆಲೆ ಇಳಿಸಬೇಕು ಎಂದು ಆಗ್ರಹಿಸಿದರು. ಸೈದಾಪುರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವಿಶ್ವನಾಥ ನೀಲಹಳ್ಳಿ, ಜಿಪಂ ಮಾಜಿ ಅಧ್ಯಕ್ಷ ಬಸವರೆಡ್ಡಿಗೌಡ ಅನಪುರ, ಜಿಪಂ ಮಾಜಿ ಸದಸ್ಯ ಕೃಷ್ಣ ಚಪೆಟ್ಲಾ, ರಘುನಾಥರೆಡ್ಡಿ ನಜರಾಪುರ, ಪುರಸಭೆ ಮಾಜಿ ಅಧ್ಯಕ್ಷ ರವೀಂದ್ರರೆಡ್ಡಿ, ಅನಂತಪ್ಪ ಯಾದಲಪುರ, ಪುರಸಭೆ ಸದಸ್ಯರಾದ ಅಶನ್ನಬುದ್ದ, ಅಶೋಕಗೌಡ, ಮೈನೊದ್ದೀನ್‌, ಅನ್ವರ್‌ ಹೈಮದ್‌, ನರಸಪ್ಪ, ವೀರಪ್ಪ ಪಡಿಗೆ, ಶರಣಪ್ಪ, ನಾರಾಯಣ, ಆನಂದ, ಚನ್ನಬಸಪ್ಪ, ಕಾಶಪ್ಪ, ಬಾಬಾ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next