Advertisement

Janardhan Reddy: ಜನಾರ್ದನ ರೆಡ್ಡಿ ಮನೆಯಲ್ಲಿ ಗನ್‌ಮ್ಯಾನ್‌ ಪಿಸ್ತೂಲ್‌ ಕಳವು

11:37 PM Oct 16, 2023 | Team Udayavani |

ಬಳ್ಳಾರಿ: ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷದ ಸಂಸ್ಥಾಪಕ, ಗಂಗಾವತಿ ಶಾಸಕ ಜಿ.ಜನಾರ್ದನ ರೆಡ್ಡಿ ಕುಟುಂಬದ ಖಾಸಗಿ ಗನ್‌ಮ್ಯಾನ್‌ಗೆ ಸೇರಿದ್ದ ಪಿಸ್ತೂಲ್‌ ಕಳವಾಗಿದ್ದು, ಈ ಕುರಿತು ಕೌಲ್‌ಬಜಾರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ನಗರದ ವೀರನಗೌಡ ಕಾಲನಿಯಲ್ಲಿರುವ ಮನೆಯಲ್ಲಿ ಈ ಘಟನೆ ನಡೆದಿದೆ. ಶಾಸಕ ಜನಾರ್ದನ ರೆಡ್ಡಿ ಅವರ ಪತ್ನಿ ಲಕ್ಷ್ಮೀ ಅರುಣಾ ಮತ್ತವರ ಮಗ ಕಿರೀಟಿಯ ಗನ್‌ಮ್ಯಾನ್‌ ಆಗಿದ್ದ ಉತ್ತರ ಪ್ರದೇಶ ಮೂಲದ ಬಾಲಾ ಮುಕುಂದ ಶುಕ್ಲಾಗೆ ಸೇರಿದ್ದ ಪಿಸ್ತೂಲ್‌ ಸೆ.28ರಂದು ಕಳವಾಗಿದೆ. ಭದ್ರತಾ ಸಿಬಂದಿ ತಮ್ಮ ರೂಮ್‌ನಲ್ಲಿ ಪಿಸ್ತೂಲ್‌ ಇಟ್ಟು ಮುಖ್ಯದ್ವಾರ ಬಾಗಿಲು ಹಾಕಿ, ಪಕ್ಕದ ಮತ್ತೂಂದು ಬಾಗಿಲನ್ನು ಹಾಕದೆ ಮಲಗಿರುವುದು ಪಿಸ್ತೂಲ್‌ ಕಳವಾಗಲು ಕಾರಣ ಎಂದು ಹೇಳಲಾಗುತ್ತಿದೆ. ಆಗಂತುಕನೊಬ್ಬ ಭದ್ರತಾ ಸಿಬಂದಿ ಮಲಗಿರುವ ಹೊತ್ತಿನಲ್ಲಿ ರೂಮ್‌ಗೆ ಬಂದು ಪಿಸ್ತೂಲನ್ನು ಕದ್ದೊಯ್ದಿರುವ ವೀಡಿಯೋ ಸಿಸಿ ಕೆಮರಾದಲ್ಲಿ ದಾಖಲಾಗಿದೆ. ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next