Advertisement

ಕೇರಳಕ್ಕೆ ಬಂದೂಕು ತೋಟೆ  ಮಾರಾಟ: ಮಡಿಕೇರಿಯಲ್ಲಿ ಮೂವರ ಬಂಧನ

12:45 AM Jan 17, 2019 | |

ಮಡಿಕೇರಿ: ಬಂದೂಕು ತೋಟೆಗಳನ್ನು ಕೇರಳ ಮೂಲದ ವ್ಯಕ್ತಿಗೆ ಅಕ್ರಮವಾಗಿ ಮಾರುತ್ತಿದ್ದ ಮಡಿಕೇರಿ ಮೂಲದ ಇಬ್ಬರು ಹಾಗೂ ಕೇರಳ ಮೂಲದ ಓರ್ವನನ್ನು ಮಡಿಕೇರಿ ಪ್ರವಾಸಿ ಮಂದಿರದ ಬಳಿ ಜಿಲ್ಲಾ ಅಪರಾಧ ಪತ್ತೆ ದಳ ಬಂಧಿಸಿದೆ.

Advertisement

ಅರ್ವತೊಕ್ಲು ಗ್ರಾಮದ ಪುತ್ತರೀರ ಪೂವಯ್ಯ, ಕೋಳುಮಾಡನ ಸಿ. ಸೂರಿ ಹಾಗೂ ಕೇರಳದ ಮುಳ್ಳಗೊಲ್ಲಿ ಪಂಚಾಯತಿನ ಪಡಚರ ಗ್ರಾಮದ  ಫ್ರಾನ್ಸಿಸ್‌ ಬಂಧಿತರು. ಅವರಿಂದ  ವಿವಿಧ ಕಂಪೆನಿಯ ಸುಮಾರು 263 ಬಂದೂಕು ತೋಟೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅಪರಾಧ ಪತ್ತೆ ದಳದ  ನಿರೀಕ್ಷಕ ಎಂ. ಮಹೇಶ್‌, ಸಿಬಂದಿ ವರ್ಗದ ವಿ.ಜಿ. ವೆಂಕಟೇಶ್‌, ಬಿ.ಎಲ್‌.ಯೋಗೇಶ್‌ ಕುಮಾರ್‌, ಕೆ.ಆರ್‌.ವಸಂತ ಹಾಗೂ ಎಂ.ಎನ್‌.ನಿರಂಜನ್‌   ಕಾರ್ಯಾ ಚರಣೆ ನಡೆಸಿದ್ದು, ಈ ತಂಡಕ್ಕೆ ಎಸ್‌ಪಿ  ನಗದು ಬಹುಮಾನ ಘೋಷಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next