Advertisement

Gundlupete: ಕಂದಕದ ಒಳಗೆ ಬಿದ್ದು ಗಂಡಾನೆ ಸಾವು

10:24 AM Oct 03, 2024 | Team Udayavani |

ಗುಂಡ್ಲುಪೇಟೆ (ಚಾಮರಾಜನಗರ): ಆನೆ ಟ್ರಂಚ್(ಕಂದಕ) ಒಳಗೆ ಬಿದ್ದು ಗಂಡಾನೆಯೊಂದು ಮೃತಪಟ್ಟಿರುವ ಘಟನೆ ತಾಲೂಕಿನ ಬಂಡೀಪುರ ಅಭಯಾರಣ್ಯದ ಓಂಕಾರ ವಲಯ ವ್ಯಾಪ್ತಿಯ ಹೊಸಪುರ ಗ್ರಾಮದ ಬಳಿ ಆ.3 ರಂದು ನಡೆದಿದೆ.

Advertisement

ಸುಮಾರು 25-30 ವರ್ಷದ ಗಂಡಾನೆಯು ಹೊಸಪುರ ಕಾಡಂಚಿನಲ್ಲಿ ಅರಣ್ಯ ಇಲಾಖೆ ತೆಗೆಗಿದ್ದ ಕಂದಕ್ಕೆ ಬಿದ್ದು ಮೃತಪಟ್ಟಿದೆ. ರೈತರು ಜಮೀನುಗಳಿಗೆ ಹೋಗುವಾಗ ಆನೆ ಸಾವನ್ನಪ್ಪಿರುವುದು ತಿಳಿದು ಬಂದಿದ್ದು, ಬುಧವಾರ ತಡರಾತ್ರಿ ಅರಣ್ಯ ದಾಟುವ ವೇಳೆ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ.

ಆನೆ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ವೈದ್ಯರ ತಪಾಸಣೆ ಬಳಿಕ ಗೊತ್ತಾಗಲಿದೆ ಎಂದು ವಲಯ ಅರಣ್ಯಾಧಿಕಾರಿ ಸತೀಶ್ ಕುಮಾರ್ ತಿಳಿಸಿದರು.

ಸೋಲಾರ್ ತಂತಿ ಸ್ಪರ್ಶದಿಂದ ಆನೆ ಸಾವು-ಶಂಕೆ:  ಕಾಡಾನೆಯು ಅರಣ್ಯ ದಾಟುವ ವೇಳೆ ಕಂದಕ‌ದ ಬಳಿ ಅಳವಡಿಕೆ ಮಾಡಿದ್ದ ಸೋಲಾರ್ ತಂತಿಯಿಂದ ವಿದ್ಯುತ್ ಪ್ರವಹಿಸಿದ ಪರಿಣಾಮ ಟ್ರಂಚ್ ಒಳಗೆ ಬಿದ್ದು ಮೃತಪಟ್ಟಿರಬಹುದು ಎಂದು ಕೆಲ ರೈತ ಮುಖಂಡರು ಶಂಕೆ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next