Advertisement

ಗುಂಡ್ಲುಪೇಟೆ: ಸಚಿವ ವಿ.ಸೋಮಣ್ಣ ಕಪಾಳಮೋಕ್ಷ ಕುರಿತು ಮಹಿಳೆ ಸ್ಪಷ್ಟನೆ

02:29 PM Oct 23, 2022 | Team Udayavani |

ಗುಂಡ್ಲುಪೇಟೆ(ಚಾಮರಾಜನಗರ): ತಾಲೂಕಿನ ಹಂಗಳ ಗ್ರಾಮದಲ್ಲಿ ವಸತಿ ಸಚಿವ ವಿ.ಸೋಮಣ್ಣ ಕೆಂಪಮ್ಮ ಎಂಬ ಮಹಿಳೆಗೆ ಕಪಾಳಮೋಕ್ಷ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಉಲ್ಟಾ ಹೊಡೆದು ನನಗೆ ಸಚಿವರು ಕಪಾಳಮೋಕ್ಷ ಮಾಡಿಲ್ಲ. ಕೇವಲ ಸಮಾಧಾನ ಪಡಿಸಿದರು ಎಂದು ಕೆಂಪಮ್ಮ ಸ್ಪಷ್ಟನೆ ನೀಡಿದ್ದಾರೆ.

Advertisement

ನಿವೇಶನ ಹಂಚಿಕೆ ವಿಚಾರವಾಗಿ ಸಚಿವರ ಬಳಿ ಮಾತನಾಡಲು ಹೋದಾಗ ನನ್ನನ್ನು ಸಮಾಧಾನ ಮಾಡಿ ಪದೇ ಪದೇ ಕಾಲಿಗೆ ಬೀಳುವುದು ಬೇಡ ಎಂದು ತಿಳಿಸಿ ನಿವೇಶನ ಕೊಡಿಸುವುದಾಗಿ ಹೇಳಿದರು. ಈ ಮೂಲಕ ಸಚಿವರು ನನಗೆ ಒಳ್ಳೆಯದೇ ಮಾಡಿದ್ಧಾರೆ. ಕೆಟ್ಟದ್ದನ್ನು ಮಾಡಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದರು.

 

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next