Advertisement

ಗುಂಡ್ಲುಪೇಟೆ:ಅಧಿಕಾರಿ ಕಾರಿನಲ್ಲಿ 20ಲಕ್ಷ ಪತ್ತೆ ಹಚ್ಚಿದ ಬಿಜೆಪಿಗರು!

01:36 PM Apr 07, 2017 | |

ಗುಂಡ್ಲುಪೇಟೆ : ಇಲ್ಲಿ ಎಪ್ರಿಲ್‌ 9 ರಂದು ನಡೆಯಲಿರುವ ಉಪಚುನಾವಣಾ ಪ್ರಚಾರದ ಭರಾಟೆ ಜೋರಾಗಿದ್ದು, ಈ ವೇಳೆ ಹಣ ಹಂಚಿಕೆಗೂ ಜೋರಾಗಿರುವುದು ಕಂಡು ಬಂದಿದೆ. ಶುಕ್ರವಾರ  ನಗರದ ಖಾಸಗಿ ಹೊಟೇಲೊಂದರ ಬಳಿ ಸರ್ಕಾರಿ ಅಧಿಕಾರಿ ಯೊಬ್ಬರ ಕಾರಿನಲ್ಲಿ 20 ಲಕ್ಷ ರೂಪಾಯಿ ಹಣವನ್ನು ಬಿಜೆಪಿ ಕಾರ್ಯಕರ್ತರು ಪತ್ತೆ ಹಚ್ಚಿದ್ದಾರೆ. 

Advertisement

ವಾಯುವ್ಯ ಕರ್ನಾಟಕ ಸಾರಿಗೆ ನಿಗಮದ  ನಿರ್ದೇಶಕ ಮನೋಜ್‌ ಕರ್ಜಗಿ ಅವರ ಕಾರಿನಲ್ಲಿ ಈ ಹಣ ಪತ್ತೆಯಾಗಿದ್ದು, 2 ಸಾವಿರ ಮುಖಬೆಲೆಯ 10 ಕಂತೆ ನೋಟುಗಳು ಇದ್ದವು ಎಂದು ವರದಿಯಾಗಿದೆ. 

ಸ್ಥಳಕ್ಕೆ ಗುಂಡ್ಲುಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು,ಕರ್ಜಗಿ ಅವರನ್ನೂ ವಶಕ್ಕೆ ಪಡೆದಿರುವ ಬಗ್ಗೆ ತಿಳಿದು ಬಂದಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next