Advertisement

ಗುಂಡ್ಲುಪೇಟೆ: ಕೃಷಿ ಹೊಂಡದಲ್ಲಿ ಬಿದ್ದು ಕೇರಳದ ಬಾಳೆಕಾಯಿ ವ್ಯಾಪಾರಿ ಸಾವು

06:35 PM Nov 12, 2022 | Team Udayavani |

ಗುಂಡ್ಲುಪೇಟೆ(ಚಾಮರಾಜನಗರ): ಬಾಳೆ ಕಾಯಿ ಖರೀದಿಗೆ ಕೇರಳದಿಂದ ಆಗಮಿಸಿದ್ದ ವ್ಯಕ್ತಿಯೋರ್ವ ಕೃಷಿ ಹೊಂಡದಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ತಾಲೂಕಿನ ಹೊನ್ನೇಗೌಡನಹಳ್ಳಿ ಗ್ರಾಮದ ಹೊರ ವಲಯದ ಜಮೀನೊಂದರಲ್ಲಿ ಶನಿವಾರ ನಡೆದಿದೆ.

Advertisement

ಕೇರಳದ ವಯನಾಡು ಜಿಲ್ಲೆಯ ಅಂಬಲಕಾಡು ಮೂಲದ ಇಸ್ಮಾಯಿಲ್(42) ಮೃತ ವ್ಯಕ್ತಿ. ಈತ ಬಾಳೆಕಾಯಿ ಖರೀದಿಗೆಂದು ಕೇರಳದಿಂದ ಬಂದಿದ್ದ ಎನ್ನಲಾಗುತ್ತಿದ್ದು, ಬಹಿರ್ದೆಸೆಗೆ ಹೋದ ವೇಳೆ ಹೊನ್ನೆಗೌಡನಹಳ್ಳಿ ಗ್ರಾಮದ ರಾಜಪ್ಪ ಎಂಬುವವರ ಜಮೀನಿನಲ್ಲಿದ್ದ ಕೃಷಿ ಹೊಂಡದಲ್ಲಿ ಕಾಲು ಜಾರಿ ಬಿದ್ದ ಪರಿಣಾಮ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಗುಂಡ್ಲುಪೇಟೆ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ ನಂತರ ಅಗ್ನಿ ಶಾಮಕ ದಳದ ಸಿಬಂದಿಯನ್ನು ಬರಮಾಡಿಕೊಂಡು ಶವವನ್ನು ಮೇಲೆತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next