Advertisement

ಸಾಗರ: ಗಡಿಬಿಡಿಯಲ್ಲಿ ಬಂದೂಕಿನಿಂದ ಗುಂಡು ಸಿಡಿದು ಬೇಟೆಗಾರ ಬಲಿ 

11:31 AM Apr 30, 2017 | |

ಸಾಗರ: ತಾಲೂಕಿನ ಕಾನುಮನೆ ಎಂಬಲ್ಲಿ ಬಂದೂಕಿನಿಂದ ಗುಂಡು ಸಿಡಿದು ಬೇಟೆಗೆ ತೆರಳಿದ್ದ ವ್ಯಕ್ತಿಯೊಬ್ಬ ದಾರುಣವಾಗಿ ಸಾವನ್ನಪ್ಪಿದ ಘಟನೆ ಶನಿವಾರ ಸಂಜೆ ನಡೆದಿದೆ. 

Advertisement

ಕಾನುಮನೆ ಸತೀಶ್‌ (35) ಎಂಬಾತ ಸಾವನ್ನಪ್ಪಿದ ವ್ಯಕ್ತಿಯಾಗಿದ್ದು, ಗುಂಡು ತಗುಲಿದ ಕೂಡಲೇ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫ‌ಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ. 

ಪುನುಗಿನ ಬೆಕ್ಕಿನ ಬೇಟೆಗೆಂದು ಐವರು ಸ್ನೇಹಿತರು ಮಾರಕಾಯುಧಗಳೊಂದಿಗೆ ತೆರಳಿದ್ದು , ಈ ವೇಳೆ ಅರಣ್ಯ ಇಲಾಖೆಯ ಜೀಪ್‌ ಬಂತೆಂದು ಗಡಿಬಿಡಿಯಲ್ಲಿ ಬಂದೂಕನ್ನು ಅಡಗಿಸಿಡಲು ಯತ್ನಿಸಿದ್ದಾರೆ. ಈ ವೇಳೆ ಗುಂಡು ಸಿಡಿದು ಅನಾಹುತ ಸಂಭವಿಸಿದೆ. 

ಸ್ಥಳಕ್ಕೆ ಸಾಗರ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿ ಉಳಿದವರ ವಿಚಾರಣೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next