Advertisement

ಗುಜರಾತ್: ದೇವಾಲಯ ಪ್ರವೇಶಿಸಿದ ದಲಿತ ಕುಟುಂಬದ ಮೇಲೆ ಹಲ್ಲೆ, 20 ಮಂದಿ ವಿರುದ್ಧ ಕೇಸ್

06:47 PM Oct 30, 2021 | Team Udayavani |

ಅಹಮ್ಮದಾಬಾದ್: ದೇವಾಲಯ ಪ್ರವೇಶಿಸಿದ ಆರೋಪದ ಮೇಲೆ ದಲಿತ ಕುಟುಂಬದ ಆರು ಮಂದಿ ಮೇಲೆ ಸುಮಾರು 20 ಮಂದಿ ಹಲ್ಲೆ ನಡೆಸಿರುವ ಘಟನೆ ಗುಜರಾತ್ ಕಛ್ ಜಿಲ್ಲೆಯ ಗಾಂಧಿಧಾಮ್ ಸಮೀಪದ ಗ್ರಾಮವೊಂದರಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಮಂಗಳವಾರ(ಅಕ್ಟೋಬರ್ 26) ಭಾಚೌ ಪೊಲೀಸ್ ಠಾಣಾ ವ್ಯಾಪ್ತಿಯ ನೇರ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಈವರೆಗೂ ಯಾರನ್ನೂ ಬಂಧಿಸಲಾಗಿಲ್ಲ ಎಂದು ಡೆಪ್ಯುಟಿ ಪೊಲೀಸ್ ವರಿಷ್ಠಾಧಿಕಾರಿ ಕಿಶೋರ್ ಸಿನ್ನಾ ಝಾಲಾ ತಿಳಿಸಿದ್ದಾರೆ.

ಘಟನೆ ಸಂಬಂಧ ಎರಡು ಎಫ್ ಐಆರ್ ದಾಖಲಿಸಲಾಗಿದೆ. ಗೋವಿಂದ್ ವಾಘೇಲಾ ಒಂದು ಎಫ್ ಐಆರ್ ದಾಖಲಿಸಿದ್ದು, ಅವರ ತಂದೆ ಜಗಭಾಯಿ ಮತ್ತೊಂದು ಎಫ್ ಐಆರ್ ದಾಖಲಿಸಿದ್ದಾರೆ. ಸುಮಾರು 20 ಮಂದಿ ತಮ್ಮ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿಸಿದ್ದಾರೆ.

ಆರೋಪಿಗಳನ್ನು ಬಂಧಿಸಲು ನಾವು ಎಂಟು ತಂಡವನ್ನು ರಚಿಸಿರುವುದಾಗಿ ಝಾಲಾ ಮಾಹಿತಿ ನೀಡಿದ್ದು, ಕಾನಾ ಅಹೀರ್. ರಾಜೇಶ್ ಮಹಾರಾಜ್, ಕೇಸ್ರಾ ರಾಬಾಯಿ, ಪಬಾ ರಾಬಾರಿ ಸೇರಿದಂತೆ 20 ಮಂದಿ ವಿರುದ್ಧ ಕೊಲೆ ಯತ್ನ, ಡಕಾಯಿತಿ, ಹಲ್ಲೆ ಸೇರಿದಂತೆ ವಿವಿಧ ಕಲಂ ಅಡಿ ದೂರನ್ನು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next