Advertisement

ತನ್ನ ಕೃಷಿ ನಿವಾಸದಲ್ಲೇ ನಿರಶನ ಸತ್ಯಾಗ್ರಹ ಆರಂಭಿಸಿದ ಹಾರ್ದಿಕ್‌

05:27 PM Aug 25, 2018 | udayavani editorial |

ಅಹ್ಮದಾಬಾದ್‌ : ಪಾಟಿದಾರ್‌ ನಾಯಕ ಹಾರ್ದಿಕ್‌ ಪಟೇಲ್‌ ಅವರು ತಮ್ಮ ಪಟೇಲ್‌ ಸಮುದಾಯದವರಿಗೆ ಮೀಸಲಾತಿ ಕೋಟಾ ಆಗ್ರಹಿಸಿ ತಮ್ಮ ಸುವಿಶಾಲ ಕೃಷಿ ತೋಟದ ಮನೆಯಲ್ಲೇ ಇಂದು ಶನಿವಾರ ಅನಿರ್ದಿಷ್ಟಾವಧಿಯ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದರು. 

Advertisement

ಹಾರ್ದಿಕ್‌ ಪಟೇಲ್‌ ಅವರಿಗೆ ಗುಜರಾತ ಸರಕಾರ ಅನೇಕ ಪ್ರತಿಭಟನ ತಾಣಗಳಿಗೆ ಅನುಮತಿ ನಿರಾಕರಿಸಿದ್ದರಿಂದ ಅಂತಿಮವಾಗಿ ಅವರು ತಮ್ಮ ಕೃಷಿ ನಿವಾಸವನ್ನೇ ಉಪವಾಸ ಸತ್ಯಾಗ್ರಹ ತಾಣಕ್ಕೆ ಆಯ್ದುಕೊಂಡರು ಎಂದು ವರದಿಗಳು ತಿಳಿಸಿವೆ. 

ಇಂದು ಶನಿವಾರ ಮಧ್ಯಾಹ್ನ 3 ಗಂಟೆಗೆ ಹಾರ್ದಿಕ್‌ ಪಟೇಲ್‌ ಅವರು ತಮ್ಮ ಬೆಂಬಲಿಗರು ಮತ್ತು ಅನೇಕ ಕಾಂಗ್ರೆಸ್‌ ಶಾಸಕರ ಉಪಸ್ಥಿತಿಯಲ್ಲಿ ತಮ್ಮ ಕೃಷಿ ನಿವಾಸದಲ್ಲೇ ಪೂಜಾವಿಧಿ ಪೂರೈಸಿ ನಿರಶನ ಸತ್ಯಾಗ್ರಹ ಆರಂಭಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next