Advertisement

ಗುಜರಾತ್‌ನಿಂದ ಬಿಹಾರಿಗಳ ನಿಲ್ಲದ ಪಲಾಯನ: ರಾಜಕೀಯ ಕೆಸರೆರೆಚಾಟ

03:41 PM Oct 09, 2018 | udayavani editorial |

ಅಹ್ಮದಾಬಾದ್‌ : ಹಿಂದಿ ಮಾತನಾಡುವ ಉತ್ತರ ಪ್ರದೇಶ ಮತ್ತು ಬಿಹಾರದ ಕೂಲಿ ಕಾರ್ಮಿಕರು ಗುಜರಾತಿನಿಂದ ಪಲಾಯನ ಮಾಡುತ್ತಿರುವುದು ಮುಂದುವರಿದೇ ಇದೆ. ಆದರೆ ಬಿಜೆಪಿ ಮತ್ತು ಕಾಂಗ್ರೆಸ್‌ ಇದಕ್ಕೆ ಪರಸ್ಪರರೇ ಕಾರಣ ಎಂದು ರಾಜಕೀಯ ಕೆಸರೆರೆಚಾದಲ್ಲಿ ತಲ್ಲೀನರಾಗಿದ್ದಾರೆ.

Advertisement

ವಲಸೆ ಕಾರ್ಮಿಕರು ವಾಸವಾಗಿರುವ ಕೈಗಾರಿಕಾ ವಸಾಹತುಗಳು ಮತ್ತು ನಿಮಾರ್ಣ ಕಾರ್ಯ ತಾಣಗಳ ಮೇಲೆ ಪೊಲೀಸರು ಬಿಗಿ ಕಣ್ಗಾವಲು, ಭದ್ರತೆ ನಡೆಸಿದ್ದಾರೆ.

ಸಬರ್‌ಕಾಂತಾ ಜಿಲ್ಲೆಯಲ್ಲಿ ಕಳೆದ ಸೆ.28ರಂದು ಬಿಹಾರದ ಕಾರ್ಮಿಕನೋರ್ವ 14 ತಿಂಗಳ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ನಡೆಸಿದ ಘಟನೆಯಿಂದ ಆಕ್ರೋಶಿತರಾಗಿರುವ ಗುಜರಾತಿಗಳು, ಬಿಹಾರ ಮತ್ತು ಉತ್ತರ ಪ್ರದೇಶದ ಕಾರ್ಮಿಕರನ್ನು ರಾಜ್ಯಾತ್ಯಂತ ಬೇಟೆಯಾಡುತ್ತಿದ್ದಾರೆ. ಅಲ್ಲಲ್ಲಿ ಹಿಂಸಾ ಪ್ರಕರಣಗಳು ಈಗಲೂ ನಡೆಯುತ್ತಿರುವುದು ವರದಿಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next