Advertisement

ಅತಿಥಿ ಉಪನ್ಯಾಸಕರ ವೇತನ ಹೊಣೆ ಪ್ರಾಂಶುಪಾಲರದ್ದು: ಶಾಸಕಿ ಶಕುಂತಳಾ

01:57 PM Apr 13, 2017 | Team Udayavani |

ಉಪ್ಪಿನಂಗಡಿ: ಅತಿಥಿ ಉಪನ್ಯಾಸಕರ ಸೇವೆ ಪಡೆದು ಬಳಿಕ ತಾಂತ್ರಿಕ ನೆಪವೊಡ್ಡಿ ವೇತನ ನೀಡದಿರುವುದು ಅಕ್ಷಮ್ಯ ನಡೆಯಾಗಿದೆ. ನೇಮಕಾತಿ ಸರಕಾರಿ ನಿಯಮಾವಳಿಯ ಉಲ್ಲಂಘನೆಯೊಂದಿಗೆ ನಡೆದಿದ್ದರೆ ಉಪನ್ಯಾಸಕರ ವೇತನ ಪಾವತಿಯ ಹೊಣೆ ಪ್ರಾಂಶುಪಾಲರದ್ದು ಎಂದು ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ, ಶಾಸಕಿ ಶಕುಂತಳಾ ಶೆಟ್ಟಿ ತಿಳಿಸಿದರು.

Advertisement

ಬುಧವಾರ ಸರಕಾರಿ ಪ್ರಥಮ ಧರ್ಜೆ ಕಾಲೇಜಿಗೆ ಡಿಢೀರ್‌ ಭೇಟಿ ನೀಡಿ, ಅತಿಥಿ ಉಪನ್ಯಾಸಕರಿಗೆ ವೇತನ ನೀಡದಿರುವ ದೂರಿನ ಕುರಿತು ಪರಿಶೀಲನೆ ನಡೆಸಿದ ಬಳಿಕ ಅವರು ಮಾತನಾಡಿದರು. ಕಾಲೇಜು ಇಲಾಖೆಯ ನಿಯಮಾವಳಿ ಯನ್ನು ಉಲ್ಲಂ ಸಿ ಅತಿಥಿ ಉಪನ್ಯಾಸಕರ ಸೇವೆ ಪಡೆಯಲಾಗಿರುವುದರಿಂದ ಹಾಗೂ ಸದ್ರಿ ನೇಮಕಾತಿಯ ವಿಚಾರ ಕಾಲೇಜು ಆಡಳಿತ ಮಂಡಳಿಗೆ ತಿಳಿಸದಿರುವುದರಿಂದ ಸದ್ರಿ ಉಪನ್ಯಾಸಕರಿಗೆ  ಪ್ರಾಂಶುಪಾಲರ ವೇತನದಿಂದಲೇ ನೀಡಬೇಕೆಂದು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರೂ ಆಗಿರುವ ಶಾಸಕಿ ತಿಳಿಸಿದರು.

ಕಳೆದ ಬಾರಿ ಕಳವಾದ ಲ್ಯಾಪ್‌ಟಾಪ್‌ ಹಾಗೂ ಪ್ರಾಜೆಕ್ಟರ್‌ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಕಾಲೇಜು ಪ್ರಾಂಶುಪಾಲೆ ಮೇರಿ, ಕಳವಿಗೀಡಾಗಿದೆ ಎನ್ನಲಾದ ನಾಲ್ಕು ಲ್ಯಾಪ್‌ಟಾಪ್‌ಗ್ಳು ಹಿಂತಿರುಗಿ ಬಂದು ಎಲ್ಲ 29 ಲ್ಯಾಪ್‌ಟಾಪ್‌ ಗಳು ಕಾಲೇಜಿನಲ್ಲಿವೆ. ಕಳವಿಗೀಡಾದ ನಾಲ್ಕು ಪ್ರಾಜೆಕ್ಟರ್‌ಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಎಲ್ಲ ನಾಲ್ಕು ಪ್ರಾಜೆಕ್ಟರ್‌ಗಳ ಮೊತ್ತವನ್ನು ಪ್ರಾಂಶುಪಾಲೆಯಾದ ತಾನೇ ಭರಿಸುತ್ತೇನೆ. ಎಂದು ತಿಳಿಸಿದರು. ಅಭಿವೃದ್ಧಿ ಸಮಿತಿಯ ಸದಸ್ಯರಾದ ಅಶ್ರಫ್ ಬಸ್ತಿಕಾರ್‌, ಕೃಷ್ಣ ರಾವ್‌ ಅರ್ತಿಲ, ಮಹೇಂದ್ರ ವರ್ಮ, ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next